ಹುಬ್ಬಳ್ಳಿ –
ಆಧಿಶಕ್ತಿ ಗ್ರೂಪ್ ನಿಂದ ಪಾಲಿಕೆಯ ಆಯುಕ್ತರಿಗೆ ಅಭಿನಂದನೆ – ನೂತನ ಆಯುಕ್ತರಿಗೆ ಆಧಿಶಕ್ತಿ ಗ್ರೂಪ್ ನ ಪರವಾಗಿ ಅಭಿನಂದಿಸಿ ಗೌರವಿಸಿದ ರುದೇಶ ಹಿರೇಮಠ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ನೂತನವಾಗಿ ಆಯುಕ್ತರಾಗಿ ಆಗಮಿಸಿದ ಡಾ ಈಶ್ವರ ಉಳ್ಳಾಗಡ್ಡಿ ಅವರನ್ನು ಹುಬ್ಬಳ್ಳಿಯ ಆಧಿಶಕ್ತಿ ಗ್ರೂಪ್ ನಿಂದ ಸ್ವಾಗತಿಸಲಾಯಿತು.
ಹೌದು ಇತ್ತೀಚಿಗಷ್ಟೇ ಪಾಲಿಕೆಗೆ ನೂತನ ಆಯುಕ್ತರಾಗಿ ಡಾ ಈಶ್ವರ ಉಳ್ಳಾಗಡ್ಡಿ ಯವರು ಆಗಮಿಸಿದ್ದಾರೆ.ಹೀಗಾಗಿ ಇವರನ್ನು ಆಧಿಶಕ್ತಿ ಗ್ರೂಪ್ ನ ಪರವಾಗಿ ವ್ಯವಸ್ಥಾಪಕ ನಿರ್ದೇಶಕ ರಾದ ರುದೇಶ ಹಿರೇಮಠ ಅವರು ಸ್ವಾಗತಿಸಿದರು.
ಹುಬ್ಬಳ್ಳಿಯ ಪಾಲಿಕೆಯ ಕಚೇರಿಯಲ್ಲಿ ನೂತನ ಆಯುಕ್ತರನ್ನು ಭೇಟಿ ಮಾಡಿದ ರುದೇಶ ಹಿರೇಮಠ ಅವರು ಸ್ವಾಗತಿಸಿದರು.ಇದೇ ವೇಳೆ ಆಧಿಶಕ್ತಿ ಗ್ರೂಪ್ ನ ಎಲೆಕ್ಟ್ರಿಕಲ್ಸ್ ಮತ್ತು ಆಧಿಶಕ್ತಿ ಎಂಟರ್ಪ್ರೈಸಸ್ ಪರವಾಗಿ ಸ್ವಾಗತಿಸಿ ಅಭಿನಂದ ನೆಗಳನ್ನು ಸಲ್ಲಿಸಿ ಗೌರವಿಸಿದರು.
ಇದೇ ವೇಳೆ ಪಾಲಿಕೆಯ ಕಚೇರಿಯಲ್ಲಿ ಕೆಲ ಸಮಯ ಕುಳಿತು ಕೊಂಡು ಅವಳಿ ನಗರದಲ್ಲಿನ ಕೆಲವೊಂದಿಷ್ಟು ಸಮಸ್ಯೆಗಳನ್ನು ಆಯುಕ್ತರ ಗಮನಕ್ಕೆ ರುದೇಶ ಹಿರೇಮಠ ಅವರು ತಗೆದು ಕೊಂಡು ಬಂದರು.ಅಭಿವೃದ್ದಿಯ ವಿಚಾರದಲ್ಲಿ ಬರುವ ದಿನಗಳಲ್ಲಿ ನಿಮ್ಮೊದಿಗೆ ನಮ್ಮ ಗ್ರೂಪ್ ಸದಾ ಇರುತ್ತದೆ ಎಂಬ ಭರವಸೆಯನ್ನು ರುದ್ರೇಶ ಹಿರೇಮಠ ಅವರು ಆಯುಕ್ತರಿಗೆ ನೀಡಿದರು.ಈ ಒಂದು ಸಮಯದಲ್ಲಿ ಸಲೀಂ,ಹಿರಿಯ ಪತ್ರಕರ್ತ ರಾದ ಮಲ್ಲಿಕಾರ್ಜುನ ಪಟ್ಟೇದ,ಸೇರಿದಂತೆ ಹಲ ವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.