ಹುಬ್ಬಳ್ಳಿ –
ಮಹದಾಯಿ ಕಳಸಾ ಬಂಡೂರಿ ಯೋಜನೆಯ ಕಾಮಗಾ ರಿಗೆ ಶೀಘ್ರವಾಗಿ ಚಾಲನೆಗೆ ಆದೇಶ ಹೊರಡಿಸುವಂತೆ ಮಹಾದಾಯಿ ಹೋರಾಟಗಾರ ವಿರೇಶ ಸೊಬರದಮಠ ಮುಖ್ಯಮಂತ್ರಿ ಗೆ ಒತ್ತಾಯ ಮಾಡಿದರು. ಹುಬ್ಬಳ್ಳಿಯಲ್ಲಿ ಭೇಟಿಯಾದ ಅವರು ನಾಡ ದೋರೆ ಗೆ ದೀಪಾವಳಿಯ ಶುಭಾಶಯ ಕೋರಿ ಈ ಭಾಗದ ರೈತರಿಗೆ ದೀಪಾವಳಿ ಹಬ್ಬದ ವಿಶೇಷ ಉಡುಗೊರೆಯಾಗಿ ನೀಡಿ ಎಂದು ವಿರೇಶ ಸೊಬರದಮಠ CM ಗೆ ಮನವಿ ಮಾಡಿದರು
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರನ್ನ ಬೇಟಿಯಾಗಿ ಮಹದಾಯಿ ಹೋರಾಟಗಾರರು ಹಾಗೂ ರೈತ ಸೇನಾ ಕರ್ನಾಟಕ (ರಿ) ಸಂಘಟನೆಯ ಸಂಸ್ಥಾಪಕ ವೀರೇಶ ಸೊಬರದಮಠ ಸ್ವಾಮೀಜಿ ಮಹದಾಯಿ ಕಳಸಾ ಬಂಡೂರಿ ಯೋಜನೆಯ ಕಾಮಗಾ ರಿಗೆ ಶೀಘ್ರವಾಗಿ ಚಾಲನೆಗೆ ಆದೇಶ ಹೊರಡಿಸಿ ಈ ಭಾಗದ ರೈತರಿಗೆ ದೀಪಾವಳಿ ಹಬ್ಬದ ವಿಶೇಷ ಉಡುಗೊರೆಯಾಗಿ ನೀಡಬೇಕು ನಂತರ, ರೈತರ ಬೆನ್ನೆಲುಬಾದ ಜಾನುವಾರು ಗಳಿಗೆ ಸರಿಯಾಗಿ ಚಿಕಿತ್ಸೆ ಸಿಗದೆ ಹಲವಾರು ತೊಂದರೆಗಿಡಾ ಗಿವೆ ಹಾಗಾಗಿ ಕೂಡಲೆ ರೈತರ ಕಷ್ಟಕ್ಕೆ ಹಾಗೂ ದನಕರುಗ ಳಿಗೆ ಸರಿಯಾಗಿ ಚಿಕಿತ್ಸೆ ನೀಡಲು ಪಶು ವೈದ್ಯಾಧಿಕಾರಿಗಳ ನೇಮಕಾತಿಗೆ ಶೀಘ್ರವಾಗಿ ಆದೇಶ ಹೊರಡಿಸುವಂತೆ ಹಾಹೇ ಜಾನುವಾರುಗಳನ್ನು ರಕ್ಷಿಸಲು ಆದೇಶಿಸಬೇಕೆಂದು ಮನವಿ ಮಾಡಿದರು