ಧಾರವಾಡ –
ಮಾಜಿ ಸಚಿವ ವಿನಯ ಕುಲಕರ್ಣಿಗೆ ಅವರಿಗೆ ಮತ್ತೆ ಅನಾಮಧೇಯ ಬೆದರಿಕೆ ಪತ್ರವನ್ನು ಬರೆಯಲಾಗಿದೆ.ಹೌದು ಪತ್ರವನ್ನು ಬರೆದಿದ್ದು ಇದರಿಂದಾಗಿ ಸಿಡಿದೆದ್ದಿರುವ ಧಾರವಾಡ ಗ್ರಾಮೀಣ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಮುಖಂಡರು ಸಿಡಿದೆದ್ದಿದ್ದು ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟವನ್ನು ಮಾಡಿದರು.
ಹೌದು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಾಮಧೇಯ ಪತ್ರವನ್ನು ಬರೆದಿರುವ ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಗ್ರಾಮೀಣ ಘಟಕದಿಂದ ಪ್ರತಿಭಟನೆಯನ್ನು ಮಾಡಲಾ ಯಿತು.
ಧಾರವಾಡ ಉಪನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಿ ನಂತರ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಪ್ರತಿಭಟನೆ ಯನ್ನು ಮಾಡಿದರು.ಅನಾಮಧೇಯ ಪತ್ರವನ್ನು ಬರೆಯುವವರನ್ನು ಈ ಕೂಡಲೇ ಬಂಧಿಸುವಂತೆ ಒತ್ತಾಯವನ್ನು ಮಾಡಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕುಳಿತು ಧರಣಿ ಮಾಡಲಾಯಿತು.
ಅನಾಮಧೇಯ ಶಕ್ತಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶವನ್ನು ವ್ಯಕ್ತಪಡಿ ಸಲಾಯಿತು.ಅನಾಮಧೇಯ ಪತ್ರ ಬರೆದವರ ವಿರುದ್ಧ ದೂರು ನೀಡಲು ಮುಂದಾಗಿದ್ದರು ವಿನಯ ಅಭಿಮಾನಿಗಳು.
ಈ ಒಂದು ಹೋರಾಟಕ್ಕೆ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಹಾಗೂ ಪುತ್ರಿ ವೈಶಾಲಿ ಪ್ರತಿಭಟನೆ ಗೆ ಸಾಥ್ ನೀಡಿದರು.ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಕುಟುಂಬಸ್ಥರು ಪಾಲ್ಗೊಂಡು ಆಕ್ರೋಶವನ್ನು ವ್ಯಕ್ತಪಡಿಸಿದ್ದು ಕಂಡು ಬಂದಿತು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..