ವಿಜಯಪುರ –
ಸಧ್ಯ ರಾಜ್ಯದಲ್ಲಿ ವರ್ಗಾವಣೆಗಾಗಿ ಶಿಕ್ಷಕರು ಒಂದು ಕಡೆ ಪರದಾಡುತ್ತಿದ್ದರೆ ಇನ್ನೊಂದು ಕಡೆ ವರ್ಗಾವಣೆಗೊಂಡ ಶಿಕ್ಷಕರು ಪರದಾಡುತ್ತಿದ್ದಾರೆ.ಹೌದು ವರ್ಗಾವಣೆಗಾಗಿ ಏನೇಲ್ಲಾ ಹರಸಾಹಸ ಮಾಡುತ್ತಿರುವ ಶಿಕ್ಷಕರು ಈಗ ವರ್ಗಾವಣೆಗೊಂಡ ಶಾಲೆಗೆ ಹೋಗಲು ಪರದಾಡುವ ಪರಸ್ಥಿತಿ ಬಂದಿದೆ.ಹೌದು ಸಧ್ಯ ರಾಜ್ಯದಲ್ಲಿ ಎರಡು ಮೂರು ಹಂತಗಳಲ್ಲಿ ಶಿಕ್ಷಕರ ವರ್ಗಾವಣೆ ಏನೋ ನಡೆದಿದ್ದು ಈಗಾಗಲೇ ಇದರಲ್ಲಿ ವರ್ಗಾವಣೆಗೊಂಡ ಶಿಕ್ಷಕರಿಗೆ ಮಾತ್ರ ಮುಕ್ತಿ ಸಿಗುತ್ತಿಲ್ಲ ಹೌದು ವರ್ಗಾವಣೆ ಗೊಂಡ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ಹೊಸ ಶಿಕ್ಷಕರು ಬರುವವರೆಗೂ ಬರದಂತೆ ಡಿಡಿಪಿಐ ಅವರು ಆದೇಶವನ್ನು ಮಾಡಿದ್ದಾರೆ.
ಹಲವು ಜಿಲ್ಲೆಗಳಲ್ಲಿ ಈ ಒಂದು ಆದೇಶವನ್ನು ಡಿಡಿಪಿಐ ಅವರು ಮಾಡಿದ್ದು ಹೀಗಾಗಿ ಶಿಕ್ಷಕರಿಗೆ ಮತ್ತೊಂದು ಸಮಸ್ಯೆ ಎದುರಾಗಿದ್ದು ಈಗಾಗಲೇ ಒಂದು ಕಡೆಗೆ ವರ್ಗಾವಣೆಗಾಗಿ ಈವರೆಗೆ ಶಿಕ್ಷಕರು ಏನೇಲ್ಲಾ ಕಷ್ಟ ಪಟ್ಟರೇ ಈಗ ವರ್ಗಾವಣೆಗೊಂಡರು ಬಿಡುಗಡೆ ಭಾಗ್ಯ ಸಿಗುತ್ತಿಲ್ಲ ಹೀಗಾಗಿ ಶಿಕ್ಷಕರು ಪರದಾಡುತ್ತಿದ್ದು ಹೀಗಾಗಿ ದೇವರು ವರಕೊಟ್ಟರು ಪೂಜಾರಿ ವರ ಕೊಡುತ್ತಿಲ್ಲಎ ಎಂಬ ಮಾತು ಸತ್ಯವಾಗಿದ್ದು ವರ್ಗಾವಣೆಯಾದ ಶಿಕ್ಷಕರ ಗೋಳನ್ನು ಯಾರು ಕೇಳುತ್ತಿಲ್ಲ ನೋಡುತ್ತಿಲ್ಲ ಇನ್ನೂ ವಿಜಯಪುರ ಜಿಲ್ಲಾ ಗ್ರಾಮೀಣ ಶಿಕ್ಷಕರ ಸಂಘದ ಜಿಲ್ಲಾ ಅದ್ಯಕ್ಷರು ಸಿದ್ದಣ್ಣ ಉಕ್ಕಲಿ ನಿಮ್ಮ ಜಿಲ್ಲೆಯ ಶಿಕ್ಷಕರ ಸಮಸ್ಯೆ ಇದಾಗಿ ದ್ದು ದಯಮಾಡಿ ನೀವು ಆದರೂ ಒಮ್ಮೆ ನೋಡಿ ಅಧಿಕಾರಿ ಗಳಿಗೆ ಮಾತನಾಡಿ ಮತ್ತೊಂದು ಸಮಸ್ಯೆಯಲ್ಲಿ ಸಿಕ್ಕು ಒದ್ದಾಡುತ್ತಿರುವ ಶಿಕ್ಷಕರಿಗೆ ನೆರವಾಗಿ ನೆಮ್ಮದಿ ನೀಡಿ