ಧಾರವಾಡ –
ಧಾರವಾಡದ ಕಲಘಟಗಿಯಲ್ಲಿ ಭೀಕರ ಅಪಘಾತ ವೊಂದು ಸಂಭವಿಸಿದ್ದು ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿ ದ್ದಾರೆ.ಹೌದು ಕಲಘಟಗಿಯ ರಾಮನಾಳ ಕ್ರಾಸ್ ನಲ್ಲಿ ಸೀ ಬರ್ಡ್ ಬಸ್ ಮತ್ತು ಕ್ರೂಜರ್ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಅಪಘಾತದಲ್ಲಿ ಇಬ್ಬರು ಕ್ರೂಜರ್ ನಲ್ಲಿದ್ದ ವರು ಸ್ಥಳದಲ್ಲೇ ಸಾವಿಗೀಡಾದವರಾಗಿದ್ದಾರೆ.
ಶಿವನಗೌಡ ಮತ್ತು ಅಮೃತ ಮೃತರಾದವರಾಗಿದ್ದು ಕಲಘಟಗಿಯ ರಾಮನಾಳ ಕ್ರಾಸ್ ಬಳಿ ನಡೆದ ಘಟನೆ ಯಲ್ಲಿ ಈ ಒಂದು ದುರುಂತ ಸಂಭವಿಸದೆ.ವೇಗವಾಗಿ ಬಂದು ಕ್ರೂಜರ್ ಗೆ ಡಿಕ್ಕಿಹೊಡೆದಿದೆ ಸೀ ಬರ್ಡ್ ಬಸ್ ಮೃತರು ಹಳಿಯಾಳ ಗ್ರಾಮದ ನಂದಗಡ ನಿವಾಸಿಗಳಾ ಗಿದ್ದು ಮೃತರಾದವರ ಪಾರ್ಥಿವ ಶರೀರವನ್ನು ತರಲು ಹೊರಟಿದ್ದರು
ಸ್ಥಳಕ್ಕೆ ಕಲಘಟಗಿ ಇನ್ಸ್ಪೆಕ್ಟರ್ ಶ್ರೀಶೈಲ ಕೌಜಲಗಿ ಭೇಟಿ ಪರಿಶೀಲನೆ ನಡೆಸಿದರು.ಇನ್ನೂ ಸಧ್ಯ ಸ್ಥಳದಲ್ಲೇ ಕಲಘಟಗಿ ಪೊಲೀಸರಿದ್ದು ಗಾಯಗೊಂಡವನ್ನು ಆಸ್ಪತ್ರೆಗೆ ಶಿಪ್ಟ್ ಮಾಡಿದ್ದು ಅಪಘಾತದ ಹೊಡೆತಕ್ಕೆ ಕ್ರೂಜರ್ ಸಂಪೂರ್ಣ ವಾಗಿ ಕಿತ್ತುಕೊಂಡು ಹೋಗಿದ್ದು ಕ್ರೂಜರ್ ನಲ್ಲಿ ನಾಲ್ಕು ಜನ ಇದ್ದ ಹಿನ್ನಲೆಯಲ್ಲಿ ಮತ್ತೊಂದು ದೊಡ್ಡ ದುರುಂತ ವೊಂದು ತಪ್ಪಿದಂತಾಗಿದೆ
https://youtu.be/YBhIoiz9K1Y
ಆದರೂ ಇಬ್ಬರು ಮೃತರಾಗಿದ್ದು ಇನ್ನೀಬ್ಬರು ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತಂತೆ ಕಲಘಟಗಿ ಪೊಲೀಸರು ದೂರನ್ನು ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.