ಹುಬ್ಬಳ್ಳಿ –
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹು-ಧಾ ಪಾಲಿಕೆ ಸದನ ಸಮತಿ ವರದಿ ಅವಕಾಶ ಕಲ್ಪಿಸಿರುವುದು ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆಯಾಗಿದೆ ಎಂದು ಮುಸ್ಲಿಂ ಧರ್ಮದ ಮುಖಂಡ ಅಶ್ಪಾಕ್ ಕುಮಟಾಕರ ಹೇಳಿದ್ದಾರೆ ಪತ್ರಿಕಾ ಪ್ರಕಟಣೆಯ ಮೂಲಕ ಅವರು ಈ ಒಂದು ವಿಚಾರ ವನ್ನು ಹೇಳಿದ್ದಾರೆ
ಸದನ ಸಮಿತಿ ವರದಿ ನೀಡುವ ಮೊದಲು ಹುಬ್ಬಳ್ಳಿ ಯಲ್ಲಿರುವ ಮುಸ್ಲಿಂ ಸಂಘಟನೆಗಳ ಅಭಿಪ್ರಾಯವನ್ನು ಕೇಳಬೇಕಿತ್ತು ಆದರೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದನ ಸಮಿತಿ ಯಾವುದೇ ಮುಸ್ಲಿಂ ಸಮಾಜದ ಮುಖಂಡರು ಹಾಗೂ ಮುಸ್ಲಿಂ ಸಂಘಟನೆಗಳ ಅಭಿಪ್ರಾಯವನ್ನು ಪಡೆಯದೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿರುವುದು.
ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಯಾವ ಕಾರಣಕ್ಕೆ ಎಂಬುದು ನಮ್ಮ ಪ್ರಶ್ನೆಯಾಗಿದೆ
ಒಂದು ಧರ್ಮದವರ ಭಾವನೆಗೆ ಧಕ್ಕೆ ಉಂಟು ಮಾಡು ವುದು ಭಗವಂತ ಗಣೇಶನಿಗೂ ಇಷ್ಟ ಆಗುವುದಿಲ್ಲ . ಹುಬ್ಬಳ್ಳಿಯಲ್ಲಿ ಅನೇಕ ಮೈದಾನಗಳು ಇದ್ದರೂ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಮುಂದಾಗಿರು ವುದು ಹಿಂದೂ ಮುಸ್ಲಿಂ ಸೌಹಾರ್ದತೆ ಹಾಳು ಮಾಡುವಂ ತಹದ್ದು ಗಣೇಶೋತ್ಸವ ಆಚರಣೆ ಮಾಡುವುದಾದರೆ ಬೇರೆ ಯಾವುದಾದರೂ ಮೈದಾನದಲ್ಲಿ ಮಾಡಬಹುದಿತ್ತು ನಮ್ನನ್ನು ಆಹ್ವಾನಿಸಿದ್ದರೆ ನಾವು ಬರುತ್ತಿದ್ದೆವು ಆದರೆ ನೀವು ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಹಠ ಏಕೆ.ಸುಪ್ರೀಂ ಕೋರ್ಟ್ ಆದೇಶದ ಅನ್ವಯ ವರ್ಷಕ್ಕೆ ಎರಡು ಬಾರಿ ನಮಾಜ್ ಮಾಡಬಹುದು.ಎರಡು ಬಾರಿ ದ್ವಜಾರೋಹಣ ಮಾಡಬಹುದು. ಅದನ್ನು ಬಿಟ್ಟು ಮಹಾನಗರ ಪಾಲಿಕೆ ಸುಪರ್ದಿಯಲ್ಲಿ ಇರಬೇಕಿತ್ತು. ಇದನ್ನು ಹೊರತು ಪಡಿಸಿ ಸುಪ್ರೀಂಕೋರ್ಟ್ ಯಾವುದೇ ಹಬ್ಬ ಕ್ಕೂ ಅವಕಾಶ ನೀಡಿಲ್ಲ .ಈ ಪಾಲಿಕೆಯ ತೆಗೆದು ಕೊಂಡು ನಿರ್ಣಯ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಮಾಡಲಾಗಿದೆ ಎಂದರು.