ಹುಬ್ಬಳ್ಳಿ –
ಹೃದಯಘಾತದಿಂದ ಎಎಸ್ ಐ ಸಾವಿ ಗೀಡಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ನಗರದ
ಪೊಲೀಸ್ ವಸತಿ ಗೃಹದಲ್ಲಿ ಈ ಒಂದು ಘಟನೆ ನಡೆದಿದೆ.ತೀವ್ರ ಹೃದಯಘಾತದಿಂದ ಗೋಕುಲ ಪೊಲೀಸ್ ಠಾಣೆಯಲ್ಲಿ ಎಎಸ್ ಐ ಯಾಗಿದ್ದ ಚಂದ್ರು ಸಾವನ್ನಪ್ಪಿದ ಪೊಲೀಸ್ ಅಧಿಕಾರಿ ಯಾಗಿದ್ದಾರೆ.
ಎಎಸ್ ಐ ಚಂದ್ರು ಚಲವಾದಿ ಮೃತರಾದವ ರಾಗಿದ್ದು ಇಲ್ಲಿನ ಕಾರವಾರ ರಸ್ತೆಯ ಹುಬ್ಬಳ್ಳಿ ಪೊಲೀಸ್ ಕ್ವಾಟರ್ಸ್ನಲ್ಲಿ ಘಟನೆ ನಡೆದಿದೆ.
1994ನೇ ಬ್ಯಾಚಿನ ಚಂದ್ರು ಚಲವಾದಿ ಎಂಬುವವರೇ ನಿಧನರಾಗಿದ್ದು ಗೋಕುಲ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಚಂದ್ರು ಅವರು ಮೂಲತಃ ಮುಳಗುಂದದವರಾ ಗಿದ್ದು ಎರಡು ಮಕ್ಕಳನ್ನ ಹೊಂದಿದ್ದರು. ಸಧ್ಯ ಇವರ ನಿಧನಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಅಧಿಕಾರಿ ಗಳು ಸಿಬ್ಬಂದಿ ಗಳು ತೀವ್ರವಾದ ಸಂತಾಪವನ್ನು ಸೂಚಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..