ಧಾರವಾಡ –
ಮತಾಂತರ ಯತ್ನ ಆರೋಪವನ್ನು ಧಾರವಾಡದ ಅಳ್ನಾವರ ಪಟ್ಟಣದಲ್ಲಿ ಭಜರಂಗ ದಳದ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ.ಹೌದು ಪ್ರಾರ್ಥನೆ ನಡೆಯುತ್ತಿದ್ದ ಮನೆ ಮೇಲೆ ದಾಳಿ ಮಾಡಿ ಪತ್ತೆ ಮಾಡಿದ್ದಾರೆ
ಭಜರಂಗ ದಳ ಕಾರ್ಯಕರ್ತರಿಂದ ಈ ಒಂದು ದಾಳಿ ಯಾಗಿದೆ.ಅಳ್ನಾವರ ಪಟ್ಟಣದ ಮನೆಯೊಂದರಲ್ಲಿ ನಡೆಯುತ್ತಿದ್ದ ಪ್ರಾರ್ಥನೆ.
ಅಳ್ನಾವರದ ಹಳಿಯಾಳ ರಸ್ತೆಯ ದಯಾಸಾಗರ ನಿವಾಸ ದಲ್ಲಿ ಪ್ರಾರ್ಥನೆ ನಡೆಯುತ್ತಿತ್ತು.ಅಳ್ನಾವರ ಮತ್ತು ಸುತ್ತ ಮುತ್ತಲಿನ ಗ್ರಾಮಗಳ ಹಿಂದೂಗಳು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.ಹಿಂದೂಗಳನ್ನು ಸೇರಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸುತ್ತಿದ್ದ ಆರೋಪದ ಹಿನ್ನಲೆಯಲ್ಲಿ ದಾಳಿ ಮಾಡಲಾಗಿದೆ.
ಈ ಹಿನ್ನೆಲೆ ಭಜರಂಗ ದಳ ಕಾರ್ಯಕರ್ತರಿಂದ ಈ ಒಂದು ದಾಳಿ ನಡೆದಿದೆ.ಪ್ರಾರ್ಥನೆ ತಡೆದು ಹೆಸರನ್ನು ಕೇಳಿ ಕೇಳಿ ಎಲ್ಲರನ್ನೂ ವಾಪಸ್ ಕಳುಹಿಸಿದ್ದಾರೆ ಕಾರ್ಯಕರ್ತರು. ಇತ್ತೀಚೆಗೆ ಮತಾಂತರಗೊಂಡಿರೋ ಕೆಲವರಿಂದ ನಡೆಯು ತ್ತಿತ್ತಂತೆ ಈ ಒಂದು ಪ್ರಾರ್ಥನೆ.ಮುಖ್ಯಮಂತ್ರಿ ಅವರಿಗೆ ನೇರವಾಗಿ ಪ್ರಶ್ನೆ ಮಾಡಿ ತಡೆ ಹಿಡಿಯುವಂತೆ ಆಗ್ರಹ ಮಾಡಿದ್ದಾರೆ.