ಧಾರವಾಡ –
ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮತ್ತು ನವೀನ ಪೊಲಿ ಶೆಟ್ಟಿ ಯವರು ನಟಿಸಿರುವ ಚಲನಚಿತ್ರಕ್ಕೆ ಶುಭ ವನ್ನು ಹಾರೈಸಿ ಧಾರವಾಡ ದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯಿಂದ ವಿಶೇಷ ಪೂಜೆ ಯನ್ನು ಮಾಡಲಾಯಿತು ಹೌದು ವೇದಿಕೆಯ ಯುವ ಸಂಸ್ಥಾಪಕರಾದ ಬಿ, ಗುಣರಂಜನ್ ಶೆಟ್ಟಿಯವರ ಸಹೋದರಿ ಹಾಗೂ ಖ್ಯಾತ ನಟಿಯಾದ ಅನುಷ್ಕಾ ಶೆಟ್ಟಿ ಮತ್ತು ನವೀನ ಪೊಲಿ ಶೆಟ್ಟಿ ಯವರು ನಟಿಸಿರುವ ಚಲನಚಿತ್ರವನ್ನು ತೆಲುಗು ತಮಿಳು ಮಲಯಾಳಂ ಹಾಗೂ ಕನ್ನಡ ಭಾಷೆ ಗಳಲ್ಲಿ ಚಲನಚಿತ್ರ ಬಿಡುಗಡೆಯಾಗಿದೆ.
ಚಲನಚಿತ್ರ ನೂರಾರು ದಿನಗಳ ಕಾಲ ಯಶಸ್ವಿ ಯಾಗಿ ನಡೆಯಲೆಂದು ಧಾರವಾಡದ ಕರ್ನಾಟಕ ಕಾಲೇಜ ವೃತ್ತದಲ್ಲಿರುವ ಗಣೇಶ ದೇವಸ್ಥಾನದಲ್ಲಿ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ವಿಶೇಷ ಪೂಜೆಯನ್ನು ಗಣಪತಿ ಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಮುಖಂಡ ರಾದ ಜಗದೀಶ ಜಾದವ, ಮಲ್ಲಿಕಾರ್ಜನ ಅಸುಂಡಿ,ಚಂದ್ರಶೇಖರ್ ಬಿಜಾಪುರ, ಶಿವನಗೌಡ ಬಿರಾದರ ರ್ಅನ್ವರ ನದಾಫ ಅರ್ಷದ ಪಠಾಣ, ಪ್ರಮೋದ ಶೆಟ್ಟಿ, ಶಿವಾನಂದ ತಡಹಾಳ, ಅಂಬರೀಶ ಗೌಳಿ,ನಾರಾಯಣ ಮೊರದ, ಬಸವರಾಜ ಪಾಟೀಲ,ಅರ್ಜುನ ಪವಾರ,ರಾಜು ಆಲೂರು,ರವಿ ನವಲಗುಂದ,ರಾಜು ತಾಳಿಕೋಟಿ, ಬಸವರಾಜ ತೇಗೂರ,ನಾಗರಾಜ ಹರಪನಹಳ್ಳಿ, ಮುಂತಾದವರು ಉಪಸ್ಥಿತರಿದ್ದರು.*
ಸುದ್ದಿ ಸಂತೆ ನ್ಯೂಸ್ ಧಾರವಾಡ…..