ಧಾರವಾಡ –
ಪಾದಚಾರಿಗೆ BRTS ಬಸ್ ಡಿಕ್ಕಿಯಾದ ಘಟನೆ ಧಾರವಾಡ ದಲ್ಲಿ ನಡೆದಿದೆ. ಹೌದು ನಗರದ ಕೋರ್ಟ್ ವೃತ್ತದಲ್ಲಿ ಈ ಒಂದು ಘಟನೆ ನಡೆದಿದ್ದು ಪರಿಣಾಮವಾಗಿ ಪಾದಚಾರಿ ಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಧಾರವಾಡದ ಕೋರ್ಟ್ ಸರ್ಕಲ್ ಬಸ್ ನಿಲ್ದಾಣದ ಬಳಿ ನಡೆದಿದೆ.ಬಸ್ ನಿಲ್ದಾಣದತ್ತ ವೇಗವಾಗಿ ಬಂದ ಬಿಆರ್ ಟಿಎಸ್ ಬಸ್ ಪಾದಚಾರಿಗೆ ಡಿಕ್ಕಿಯಾಗಿದೆ.ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಗಲಕೋಟೆ ಯ ಮಲ್ಲಣ್ಣ ಮೇಟಿ ಗಾಯಗೊಂಡವರಾಗಿದ್ದಾರೆ
ಬಸ್ ಡಿಕ್ಕಿಯಾದ ಕೂಡಲೇ ಅಲ್ಲೇ ಕುಸಿದು ಬಿದ್ದರು ಕೂಡಲೇ ಇವರನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲು ಮಾಡಿದರು.ಇನ್ನೂ ಸುದ್ದಿ ತಿಳಿದ ಧಾರವಾಡ ಸಂಚಾರಿ ಪೊಲೀಸ್ ಠಾಣೆ ಯ ಸಿಬ್ಬಂದಿ ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರನ್ನು ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ