This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

ಧಾರವಾಡ

ತಾಳೆ ಸಸಿ ನಾಟಿ ಮಾಡುವ ಮೂಲಕ ತಾಳೆ-ಬೆಳೆ ಪ್ರದೇಶ ವಿಸ್ತರಣೆ ಕಾರ್ಯಕ್ರಮದ ಅಭಿಯಾನಕ್ಕೆ ಚಾಲನೆ – ಶಿವಲೀಲಾ ವಿನಯ ಕುಲಕರ್ಣಿ ಚಾಲನೆ ಅಧಿಕಾರಿಗಳು ಉಪಸ್ಥಿತಿ……

WhatsApp Group Join Now
Telegram Group Join Now

ಧಾರವಾಡ

ತೋಟಗಾರಿಕೆ ಇಲಾಖೆ ತಾಳೆ ಬೆಳೆ ಪ್ರದೇಶ ವಿಸ್ತರಣೆ ಕಾರ್ಯಕ್ರಮ ಹೌದು ತೋಟಗಾರಿಕೆ ಪಿತಾಮಹ ಡಾ. ಎಂ. ಹೆಚ್. ಮರಿಗೌಡರ ಜನ್ಮ ದಿನಾಚರಣೆ ಅಂಗವಾಗಿ ತೋಟಗಾರಿಕೆ ಇಲಾಖೆ ಹಾಗೂ 3ಎಫ್ ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್ ಕಂಪನಿರವರ ಸಹಯೋಗದಲ್ಲಿ ಧಾರವಾಡ ತಾಲ್ಲೂಕಿನ ತಿಮ್ಮಾಪೂರ ಗ್ರಾಮದ ಮಹಾಂತಯ್ಯ ಹಿರೇಮಠ ರವರ ಹೊಲದಲ್ಲಿ ತಾಳೆ ಸಸಿ ನಾಟಿ ಮಾಡುವ ಮೂಲಕ ತಾಳೆ-ಬೆಳೆ ಪ್ರದೇಶ ವಿಸ್ತರಣೆ ಕಾರ್ಯಕ್ರಮದ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಉದ್ಘಾಟಕರಾಗಿ ಶಿವಲೀಲಾ ವಿನಯ ಕುಲಕರ್ಣಿ ರವರು ಆಗಮಿಸಿದ್ದರು.ಮರೇವಾಡ ಗ್ರಾಮ ಪಂಚಾಯತ್ ಅಧ್ಯಕ್ಷ ಈರಪ್ಪ ಪೂಜಾರ ಅಧ್ಯಕ್ಷತೆ ವಹಿಸಿದ್ದರು ಕಾರ್ಯಕ್ರಮದಲ್ಲಿ ಮರೇವಾಡ, ತಿಮ್ಮಾಪೂರ ಹಾಗೂ ಅಮ್ಮಿನಬಾವಿ ಗ್ರಾಮಗಳ ರೈತರು ಮತ್ತು ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕ ಕಾಶೀನಾಥ ಭದ್ರಣ್ಣವರ,ಅಮ್ಮಿನಬಾವಿ ರೈ. ಸಂ. ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಮಹೇಶ ಪಟ್ಟಣಶೆಟ್ಟಿ ಹಾಗೂ 3ಎಫ್ ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಧಾರವಾಡ ಜಿಲ್ಲೆಯ ಏರಿಯಾ ಮ್ಯಾನೇಜರ್ ಮೃತ್ಯುಂಜಯ ಪಾಟೀಲ ಮತ್ತು ಕ್ಲಸ್ಟರ್ ಆಫೀಸರ್ ಸಿದ್ದಪ್ಪ ಕುಂದರಗಿ ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ……


Google News

 

 

WhatsApp Group Join Now
Telegram Group Join Now
Suddi Sante Desk