ಧಾರವಾಡ –
ಬೆಳಗಾವಿಯಲ್ಲಿ ಸಂಗೋಳ್ಳಿ ರಾಯಣ್ಣನ ಮೂರ್ತಿ ಭಗ್ನಗೊಳಿಸಿದಕ್ಕೆ ರಾಜ್ಯಾದ್ಯಂತ ತೀವ್ರವಾದ ಖಂಡನೆ ವ್ಯಕ್ತವಾಗುತ್ತಿದ್ದು ಇನ್ನೂ ಇತ್ತ ಧಾರವಾಡ ದಲ್ಲಿ ಖಂಡನೆ ಕಂಡು ಬಂದಿದೆ.
ಹೌದು ಈ ಒಂದು ಹಿನ್ನೆಲೆಯಲ್ಲಿ ನಗರದಲ್ಲಿ ಪ್ರತಿಭಟನೆ ಮಾಡಲಾಯಿತು.ಹೌದು ಧಾರವಾಡದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಆಕ್ರೋಶವನ್ನು ವ್ಯಕ್ತಪಡಿಸಲಾಯಿತು.ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಈ ಒಂದು ಪ್ರತಿಭಟನೆ ಕಂಡು ಬಂದಿತು. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಯನ್ನು ಮಾಡಿದರು.
ರಾಯಣ್ಣ ಮೂರ್ತಿ ಭಗ್ನ ಮಾಡಿದವರಿಗೆ ಗಡಿ ಪಾರು ಮಾಡುವಂತೆ ಆಗ್ರಹ ಕೇಳಿ ಬಂದಿತು.ಎಂ ಇ ಎಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು.ಇದೇ ವೇಳೆ ಜಿಲ್ಲಾಧಿಕಾರಿಗೆ ಮನವಿ ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯ ಮಾಡಲಾಯಿತು.ಈ ಒಂದು ಪ್ರತಿಭಟನೆ ಯಲ್ಲಿ ಸುರೇಶ ಗೋಕಾಕ ಅವರೊಂದಿಗೆ ಪ್ರವೀಣ ಗೋಕಾವಿ, ಯಲ್ಪಪ್ಪ ಅಂಬಿಗೇರ,ರಾಮು ದಳವಿ,ದುರ್ಗೇಶ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.