ಧಾರವಾಡ –
ಇತ್ತೀಚಿಗೆ ರಾಜ್ಯ ಸೇರಿದಂತೆ ಹಲವೆಡೆ ನಡೆದ ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕ್ಕೆ ಖಂಡನೆ ವ್ಯಕ್ತವಾಗಿದ್ದು ಇನ್ನೂ ಈ ಒಂದು ಘಟನೆ ಗಳನ್ನು ಖಂಡಿಸಿ ಧಾರವಾಡ ದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟನೆ ಮಾಡಿ ಮನವಿ ನೀಡಲಾಯಿತು
ಹೌದು ಇತ್ತೀಚೆಗೆ ದೇಶದ ಎಲ್ಲ ರಾಜ್ಯಗಳಲ್ಲೂ ಮಹಿಳೆ ಯರು ಹಾಗೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಅತ್ಯಾಚಾರದ ಪ್ರಕರಣಗಳು ದಿನ ದಿನಕ್ಕೆ ಹೆಚ್ಚಾಗುತ್ತಿವೆ.ಅಪರಾಧಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು ಹೀಗಾಗಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಬಿ, ಗುಣರಂಜನ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ರಾಜ್ಯ ಕಾರ್ಯಾಧ್ಯಕ್ಷರಾದ ಅಣ್ಣಪ್ಪ ಒಲೇಕಾರ, ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಧಾರವಾಡದಲ್ಲಿ ಪ್ರತಿಭಟನೆ ಮಾಡಿ ಮನವಿ ನೀಡಲಾಯಿತು
ಜಿಲ್ಲಾಧಿಕಾರಿಗಳು,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳಿಗೆ,ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಬೇಕೆಂದು ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಶಿವಾನಂದ ಕುಂಬಾರ,ತುಕಾರಾಮ ಮೋಹಿತೆ,ಜಗದೀಶ್ ಜಾಧವ್,ನಾಗರಾಜ್ ರಾಯಣ್ಣವರ್ ,ಕಮಲೂ ಫೂಲ್ವಾಲೆ,ಬಸವರಾಜ ಬಡಗೇರ,ಹರ್ಷದ್ ಪಠಾನ್,ಶ್ರೀಕಾಂತ್ ನಟೇಗಲ್,ಈರಣ್ಣ ಬಡಿಗೇರ, ಕುಮಾರ ಬಾಳಿಮಠ, ಶಿವಾನಂದ ನವಲಗುಂದ, ಎಮ್,ಎಚ್,ಖಾಜಿ ಈರಣ್ಣ ತಡಕೇೂಡ ಮುಂತಾದ ವರು ಉಪಸ್ಥಿತರಿದ್ದರು.