ಹಾಸನ –
ಹೌದು ಅರ್ಧ ಗಂಟೆಯಲ್ಲಿ 90 Ml ನ 10 ಪ್ಯಾಕೆಟ್ ಕುಡಿಯುವ ಚಾಲೆಂಜ್ ಕಟ್ಟಿ ಕುಡಿದು ವ್ಯಕ್ತಿ ಯೊರ್ವ ಸಾವಿಗೀಡಾದ ಘಟನೆ ಹಾಸನ ದಲ್ಲಿ ನಡೆದಿದೆ ಮದ್ಯ ಕುಡಿಯುವ ಚಾಲೆಂಜ್ ಕಟ್ಟಿದ್ದ ದೇವರಾಜ್ ಮತ್ತು ತಿಮ್ಮೇಗೌಡ .
ಕುಡಿತದ ಬಾಜಿ ಕಟ್ಟಿ ಪ್ರಾಣ ಕಳೆದುಕೊಂಡ ವ್ಯಕ್ತಿ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಸಿಗರನಹಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಅರ್ಧ ಗಂಟೆಯಲ್ಲಿ 90 ಎಂಲ್ನ 10 ಪ್ಯಾಕೇಜ್ ಮದ್ಯ ಕುಡಿಯುವ ಚಾಲೆಂಜ್ ಕಟ್ಟಿದ್ದ ಗ್ರಾಮದ ದೇವರಾಜ್ ಮತ್ತು ತಿಮ್ಮೇಗೌಡ.ಇಬ್ಬರ ನಡುವೆ ನಡೆದ ಚಾಲೆಂಜ್ನಲ್ಲಿ ಹೆಚ್ಚು ಮದ್ಯ ಸೇವಿಸಿದ್ದ ತಿಮ್ಮೇಗೌಡ(60) ಸಾವಿಗೀಡಾಗಿದ್ದಾನೆ
ಗ್ರಾಮದ ಬಸ್ ನಿಲ್ದಾಣದಲ್ಲಿ ದೇವರಾಜು ಹಾಗೂ ತಿಮ್ಮೇಗೌಡರ ನಡುವೆ ಚಾಲೆಂಜ್ ನಡೆದಿತ್ತು.ಮೂವತ್ತು ನಿಮಿಷದಲ್ಲಿ 90 ಎಂಲ್ನ ಹತ್ತು ಪ್ಯಾಕೇಟ್ ಮದ್ಯ ಕುಡಿಯುವ ಚಾಲೆಂಜ್ ಇಬ್ಬರಿಗೂ ಮದ್ಯದ ಪ್ಯಾಕೆಟ್ಗಳನ್ನು ನೀಡಿದ್ದ ಕೃಷ್ಣೇಗೌಡ.ಮೂವತ್ತು ನಿಮಿಷಗಳಲ್ಲಿ ಚಾಲೆಂಜ್ ಗೆಲ್ಲಲು ಮದ್ಯ ಕುಡಿದು ರಕ್ತ ವಾಂತಿ ಮಾಡಿ ಕೊಂಡು ಬಸ್ ನಿಲ್ದಾಣದಲ್ಲೇ ಬಿದ್ದಿದ್ದ ತಿಮ್ಮೇಗೌಡ.
ತಿಮ್ಮೇಗೌಡ ಅಸ್ವಸ್ಥ ನಾಗುತ್ತಲೆ ಸ್ಥಳದಿಂದ ಎಸ್ಕೇಪ್ ಆಗಿದ್ದ ದೇವರಾಜು ಮತ್ತು ಕೃಷ್ಣೇಗೌಡ ಕುಡಿದು ಸುಸ್ತಾಗಿ ಬಿದ್ದಿದ್ದ ತಿಮ್ಮೇಗೌಡನನ್ನು ಮನೆಗೆ ಕರೆತಂದು ಬಿಟ್ಟಿದ್ದ ಗ್ರಾಮಸ್ಥರು ಹಬ್ಬ ಕ್ಕಾಗಿ ಸಂಬಂಧಿಕರ ಮನೆಗೆ ತೆರಳಿದ್ದ ತಿಮ್ಮೇಗೌ ಡನ ಸಂಬಂದಿಕರು.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಾವನ್ನಪ್ಪಿ ದ್ದಾನೆ. ತಿಮ್ಮೇಗೌಡ ಘಟನೆ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ತಿಮ್ಮೇಗೌಡರ ಪುತ್ರಿ ದೇವರಾಜು ಹಾಗೂ ಕೃಷ್ಣೇಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.
ಸುದ್ದಿ ಸಂತೆ ನ್ಯೂಸ್ ಹಾಸನ…..