ಧಾರವಾಡ –
ಹೊಸ ಕಸನುಗಳೊದಿಗೆ ಹೊಸ ಉತ್ಸಾಹ ದೊಂದಿಗೆ ಗೆದ್ದು ಬಂದಿರುವ ಯುವ ಉತ್ಸಾಹಿ ಮಹಾನಗರ ಪಾಲಿಕೆಯ ಸದಸ್ಯರಲ್ಲಿ ಧಾರವಾಡದ ವಾರ್ಡ್ 24 ರ ಕಾಂಗ್ರೆಸ್ ಪಕ್ಷದ ಪಾಲಿಕೆಯ ಸದಸ್ಯ ಡಾ ಮಯೂರ ಮೊರೆ ಕೂಡಾ ಒಬ್ಬರು. ಮೊದಲ ಬಾರಿಗೆ ಸ್ಪರ್ಧೆ ಮಾಡಿ ಗೆದ್ದಿದ್ದಾರೆ ಇವರು.ಗೆದ್ದ ಖುಷಿ ಯಲ್ಲಿ ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳದೆ ಆಯ್ಕೆ ಮಾಡಿದ ಜನರ ಸೇವೆಗೆ ಮುಂದಾಗಿದ್ದಾರೆ
ಹೌದು ನವಲೂರು ಗ್ರಾಮದ ದೇಸಾಯಿ ಓಣಿ ಮತ್ತು ಜಗದಾಳೆ ಓಣೆ ಒಳಚರಂಡಿ ಮುಖ್ಯ ಲೈನ್ ಪೈಪ್ ದುರಸ್ತಿ ಮಾಡುವುದರ ಮೂಲಕ ಜನರ ಸೇವೆ ಯನ್ನು ಮಾಡುತ್ತಿದ್ದಾರೆ.ಒಳಚರಂಡಿ ಮುಖ್ಯ ಲೈನ್ ಒಳಚರಂಡಿ ಕಸಕಡ್ಡಿಗಳಿಂದ ತುಂಬಿದ್ದು ಅಲ್ಲಿ ಚರಂಡಿ ನೀರು ಹಾದು ಹೋಗದೆ ಆ ಸ್ಥಳದಲ್ಲಿ ಚೇಂಬರ್ ಬ್ಲಾಕ್ ಆಗಿ ಸುಮಾರು ಕಳೆದ ನಾಲ್ಕು ತಿಂಗಳಿನಿಂದ ಒಳಚರಂಡಿ ನೀರು ತುಂಬಿ ಹರಿಯು ತ್ತಿದ್ದು ಇಲ್ಲಿಯ ನಿವಾಸಿಗಳಿಗೆ ತುಂಬ ತೊಂದರೆ ಯಾಗುತ್ತಿದ್ದರೆ ಹಿನ್ನೆಲೆಯಲ್ಲಿ ಇಂದು ಸ್ಥಳಕ್ಕೆ ಭೇಟಿ ಕೊಟ್ಟು ಸಮಸ್ಯೆ ಯನ್ನು ಪರಿಹಾರ ಮಾಡಿದರು
ಮಹಾನಗರಪಾಲಿಕೆ ಸದಸ್ಯರಾಗಿ ಅದೇ ಖುಷಿ ಯಲ್ಲಿ ಸುಮ್ಮನೆ ಇರದೇ ವಾರ್ಡ್ ನಲ್ಲಿ ಸುತ್ತಾಟ ಆರಂಭ ಮಾಡಿದ್ದಾರೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಈ ಸಮಸ್ಯೆ ಕುರಿತು ಇಲ್ಲಿವರೆಗೆ ಕೈಗೊಂಡ ಕ್ರಮಗಳ ಕುರಿತಾಗಿ ವಿವರ ವಾಗಿ ಚರ್ಚಿಸಲಾಯಿತು ಮತ್ತು ದುರಸ್ತೆ ಮಾಡಲಾ ಈ ಸಂಧರ್ಭದಲ್ಲಿ ಇಂದು ಮಯೂರ್ ಮೋರೆ ಅವರೊಂದಿಗೆ ಗ್ರಾಮದ ಗುರು ಹಿರಿಯರು ಚೆನ್ನಪ್ಪ ಬೆಂಗೇರಿ,ಪ್ರಕಾಶ ಬೆಂಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು