ಧಾರವಾಡ –
ಧಾರವಾಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಧಾರವಾಡ ಜಿಲ್ಲೆಯ ಹೊನ್ನಾಪೂರದ ಪ್ರಭುದೇವ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕರಾದ ಚಲನಚಿತ್ರ ನಿರ್ದೇಶಕ ಗಾಯಕರು ಸಂಪನ್ಮೂಲ ವ್ಯಕ್ತಿಗಳು ಹಾಗೂ ಹವ್ಯಾಸಿ ಕಲಾವಿದರು ಬಾಬಾ ಜಾನ ಮುಲ್ಲಾ ಅವರಿಗೆ ಸನ್ಮಾನಿಸಿ ಗೌರವಿಸಲಾ ಯಿತು.
ಹೌದು ಅತ್ತ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಇತ್ತ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ವತಿಯಿಂದ ಹಾಗೂ ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ವತಿಯಿಂದ ಧಾರವಾಡದ ಅಂಜುಮನ ಕಾಲೇಜಿನ ಆವರಣ ದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಮಾರ್ತಾಂಡಪ್ಪ ಎಮ್ ಕತ್ತಿ,ಎಲ್ ಐ ಲಕ್ಕಮ್ಮನವರ ಎಂ ಎಂ ಕೊಹಲಿ,ಅಕ್ಬರಲಿ ಸೋಲಾಪುರ ರಾಜೀವ ಹಲವಾಯಿ,ನಂದಕುಮಾರ ದ್ಯಾಪೂರ, ರುದ್ರೇಶ ಕುರ್ಲಿ ಎ ಎ ಕಿತ್ತೂರ ಇದ್ದರು,