ಧಾರವಾಡ –
ಧಾರವಾಡ, ಗದಗ,ಹಾವೇರಿ ಈ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿನ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಪಕ್ಷದಿಂದ ಧಾರವಾಡದ ಯುವ ನಾಯಕ, ಅಲ್ಪಸಂಖ್ಯಾತರ ನಾಯಕ ಅಂಜುಮನ್ ಸಂಸ್ಥೆಯ ಮುಖಂಡ ಇಸ್ಮಾಯಿಲ್ ತಮಟಗಾರ ಅವರಿಗೆ ವಿಧಾನ ಪರಿಷತ್ ಟಿಕೆಟ್ ಕೊಡುವಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ಡಾ ಮಯೂರ ಮೋರೆ ಒತ್ತಾಯ ಮಾಡಿದ್ದಾರೆ
ಎರಡು ಬಾರಿ ಧಾರವಾಡ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷರಾಗಿ ಧಾರವಾಡ 74 ವಿಧಾನ ಸಭೆ ಕ್ಷೇತ್ರದ ಪರಾಜಿತ ಅಭ್ಯರ್ಥಿಯಾಗಿದ್ದು ಹೀಗಾಗಿ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಇಸ್ಮಾಯಿಲ್ ತಮಾಟಗಾರ ಅವರಿಗೆ ಧಾರವಾಡ,ಹಾವೇರಿ, ಗದಗ,ಜಿಲ್ಲೆಗೆ ಸಂಬಂಧ ಪಟ್ಟ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ತಿನ ಚುನಾವಣೆ ನಡೆಯಲಿದ್ದು ಆ ಒಂದು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ನ್ನು ನೀಡಬೇಕು ಎಂದು ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಮನವಿ ಯನ್ನು ಮಾಡಿದ್ದಾರೆ.ಇವರೊಂದಿಗೆ ಅವರ ಅಭಿಮಾನಿ ಗಳು ಕೂಡಾ ಆಗ್ರಹ ವನ್ನು ಮಾಡಿದ್ದಾರೆ