ಧಾರವಾಡ –
ಇನ್ನೇನು ಮೂರು ನಾಲ್ಕು ತಿಂಗಳು ಕಳೆದರೆ ಸಾಕು ರಾಜ್ಯದಲ್ಲಿ ಸಾಮೂಹಿಕ ವಿಧಾನಸಭಾ ಚುನಾವ ಣೆಗಳು ಬರಲಿದ್ದು ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕಿ ಶ್ರೀಮತಿ ಸೀಮಾ ಮಸೂತಿ ಚುನಾವಣೆಯ ಅಖಾಡಕ್ಕೇ ಇಳಿದಿದ್ದಾರೆ.ಹೌದು ಇನ್ನೇನು ಚುನಾವಣೆಗಳು ಸಮೀಪಿಸುತ್ತಿದ್ದಂತೆ ಸೀಮಾ ಮಸೂತಿಯವರು ಈಗಲೇ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆ ಮಾಡುವ ಸಿದ್ದತೆ ಕುರಿ ತಂತೆ ಬಿಜೆಪಿ ಮಹಿಳಾ ಮುಖಂಡರು ಮತ್ತು ಪಕ್ಷದ ಮುಖಂಡರೊಂದಿಗೆ ಸಭೆಯನ್ನು ಮಾಡಿ ದರು.
ಹುಬ್ಬಳ್ಳಿಯ ಪಕ್ಷದ ಕಚೇರಿಯಲ್ಲಿ ಈ ಕುರಿತಂತೆ ಸೀಮಾ ಮಸೂತಿಯವರು ಸಭೆಯನ್ನು ಮಾಡಿ ಮುಂದಿನ ಕಾರ್ಯತಂತ್ರಗಳ ಕುರಿತಂತೆ ಚರ್ಚೆ ಯನ್ನು ಮಾಡಿದರು.ಭಾರತೀಯ ಜನತಾ ಪಕ್ಷ ಧಾರವಾಡ ತಾಲೂಕು ವತಿಯಿಂದ ಮಹಿಳಾ ಮೋರ್ಚಾ ಕಾರ್ಯಕಾರಣಿ ಸಭೆಯಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಶ್ರೀಮತಿ ಸೀಮಾ ಮಸೂತಿ ರವರ ನೇತೃತ್ವದಲ್ಲಿ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾ ಯಿತು ಇದೇ ಸಂದರ್ಭದಲ್ಲಿ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಮಹಿಳೆಯರ ಪಾತ್ರದ ಬಗ್ಗೆ ವಿವರಿಸಲಾಯಿತು.
ಕಾರ್ಯಕ್ರಮದಲ್ಲಿ ಪಕ್ಷದ ಸಿದ್ಧಾಂತ ಹಾಗೂ ಬಿಜೆಪಿ ಪಕ್ಷದ ಆಡಳಿತವನ್ನು ಶ್ರೀಮತಿ ಸುಮಾ ಗಿರೆಪ್ಪನವರ,ಶ್ರೀಮತಿ ಭಾಗ್ಯ ಹಿರೇಮಠ, ಶ್ರೀಮತಿ ನಾಗಮ್ಮ ಗಿರೆಪ್ಪನವರ ಸೇರಿದಂತೆ ಹಲವರು ಪಕ್ಷಕ್ಕೆ ಸೇರ್ಪಡೆಗೊಂಡರು.ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಅಳಗವಾಡಿ, ಶ್ರೀನಿವಾಸ್ ಕೋಟ್ಯಾನ ಆಡಳಿತ ಮಂಡಳಿ ಸದಸ್ಯರು ಕೃಷಿ ವಿವಿ ಧಾರವಾಡ, ಪಾಲಿಕೆ ಸದಸ್ಯರಾದ ಶ್ರೀಮತಿ ಅನಿತಾ ಚಳಗೇರಿ, ಶ್ರೀಮತಿ ರತ್ನ ನಾಝರೆ, ಶ್ರೀಮತಿ ಸುಮಿತ್ರ ಬಡಿ ಗೇರ ಶ್ರೀಮತಿ ಮಾಲತಿ ಬರ್ಗೆ, ರೇಣುಕಾ ಲಿಂಬ ದೇವರಮಠ, ರೇಣುಕಾ ಕೋಳಿಕರ ಸೇರಿದಂತೆ ಮಹಿಳಾ ಮೋರ್ಚಾ ಪದಾಧಿಕಾರಿಗಳು ಉಪಸ್ಥಿ ತರಿದ್ದರು.
ಸುದ್ದಿ ಸಂತೆ ನ್ಯೂಸ್…..