ಹುಬ್ಬಳ್ಳಿ –
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿರುವ ಕ್ರಮವನ್ನು ಶ್ರೀರಾಮ ಸೇನೆ ಸೇರಿದಂತೆ ಇನ್ನಿತರ ಸಂಘಟನೆಗಳು ಸ್ವಾಗತಿಸಿದ್ದಾರೆ ಅತ್ತ ಅನುಮತಿ ಸಿಗುತ್ತಿದ್ದಂತೆ ಇತ್ತ ನಗರದಲ್ಲಿ ವಿಜಯೋ ತ್ಸವ ಆಚರಣೆ ಮಾಡಿದರು ಸಿಹಿ ತಿನ್ನಿಸಿ ಸಂಭ್ರಮಿಸಿದರು ಇದೇ ವೇಳೆ ಪ್ರಮೋದ ಮುತಾಲಿಕ ಮಾತನಾಡಿ ಸಧ್ಯ ಯಾವುದೇ ಸಾರ್ವಜನಿಕ ಗಣೇಶೋತ್ಸವ ಮಂಡಳಿಗೆ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಟ್ಟರೂ ಎಲ್ಲರೂ ಒಟ್ಟಾಗಿ ಹಬ್ಬ ಮಾಡುತ್ತೇವೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಹಲವಾರು ವರ್ಷಗಳಿಂದ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೋರಿ ಹೋರಾಟ ಮಾಡುತ್ತಾ ಬರಲಾಗಿದೆ.ಈ ಹೋರಾಟಕ್ಕೆ ಇಂದು ಜಯ ದೊರೆಕಿದೆ.ಆದರೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆ ಯುತ್ತಾ ಬಂದರೂ ಸರ್ಕಾರದ ಸ್ಥಳದಲ್ಲಿ ಗಣೇಶೋತ್ಸವ ಆಚರಣೆಗೆ ಭಿಕ್ಷೆ ಬೇಡುತ್ತಿರುವುದು ನೋವಿನ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೀಗ ನಮ್ಮ ಹೋರಾಟಕ್ಕೆ ವಿಜಯ ಸಿಕ್ಕಿದೆ ಆದರೆ ಕಾಂಗ್ರೆಸ್ ನವರು ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ವಿರೋಧ ಮಾಡಿದ್ದಾರೆಂಬ ಸುದ್ದಿ ಬಂದಿದೆ. ಅವರಿಗೆ ನಾಚಿಕೆ ಮಾನ ಮರ್ಯಾದೆ ಇದ್ದರೆ ಗಣೇಶನಿಗೆ ವಿರೋಧ ಮಾಡಿದಂತೆ ನಮಾಜ್ ಮಾಡುವ ವರಿಗೂ ವಿರೋಧ ಮಾಡಲಿ.ಈ ರೀತಿ ವಿರೋಧ ಮಾಡು ವುದು ಸರಿಯಲ್ಲ.ಎಲ್ಲರೂ ಶಾಂತಿಯಿಂದ ಸೌಹಾರ್ದತೆ ಯಿಂದ ಹಬ್ಬ ಆಚರಣೆ ಮಾಡೋಣ ಎಂದರು.
ಗಣೇಶೋತ್ಸವ ಆಚರಣೆ ವೇಳೆ ಹಿಂದೂಗಳಿಂದ ಯಾವುದೇ ರೀತಿಯ ಗಲಭೆ ಗಲಾಟೆಯಾಗುವುದಿಲ್ಲ. ಹಾಗೇನಾದರೂ ತಪ್ಪಾದರೇ ನಮ್ಮನ್ನು ಗಲ್ಲಿಗೆ ಏರಿಸಲಿ. ಪೋಲಿಸರು ಶಾಂತಿ ಕಾಪಾಡುವ ನಿಗಾ ವಹಿಸಬೇಕು. ಇದೀಗ ಆರು ಸಾರ್ವಜನಿಕ ಗಣೇಶೋತ್ಸವ ಮಂಡಳಿ ಯಲ್ಲಿ ಯಾವುದೇ ಒಂದಕ್ಕೂ ಕೊಟ್ಟರೂ ಒಟ್ಟಾಗಿ ಗಣೇಶ ಚತುರ್ಥಿ ಆಚರಣೆ ಮಾಡುತ್ತೇವೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.