ಬೆಂಗಳೂರು –
ಲಂಚಕ್ಕೆ ಬೇಡಿಕೆ ಇಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಇವರ ಪತಿರಾಯ ರೆಡ್ ಹ್ಯಾಂಡ್ ಆಗಿ ಸಿಸಿಬಿ ಬಲೆಗೆ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಬೆಂಗಳೂರು ದಕ್ಷಿಣ ವಲಯದ ಚೋಳನಾಯಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಮತ್ತು ಈಕೆಯ ಪತಿ ಶಿವರಾಜ್ ಕುಮಾರ್ ನನ್ನು ಬಂಧಿಸಲಾಗಿದೆ.
ಇ-ಖಾತಾ ಪಡೆಯಲು ಪಂಚಾಯಿತಿಗೆ ಬಂದ ವ್ಯಕ್ತಿಯಿಂದ 2.50 ಲಕ್ಷ ಬೇಡಿಕೆ ಇಟ್ಟಿದ್ದು 50 ಸಾವಿರ ಮುಂಗಡ ಹಣ ಪಾವತಿ ಮಾಡಿದ್ದಾರೆ.ಈ ಸಂಬಂಧ ಹಣ ಪಾವತಿಸಿದ ವ್ಯಕ್ತಿ ಎಸಿಬಿ ಗೆ ದೂರು ಸಲ್ಲಿಸಿದ್ದಾರೆ.ವ್ಯಕ್ತಿಯಿಂದ ಮುಂಗಡ ವಾಗಿ 2 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಟ್ರ್ಯಾಪ್ ಮಾಡಿದ್ದು ಪತಿ ಪತ್ನಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿ ಸಿದ್ದಾರೆ.