ಧಾರವಾಡ –
ದೇಶವನ್ಮು ಆಳ್ಚಿಕೆ ಮಾಡುವ ರಾಜಕಾರಣಿಗಳು ಹೇಗಿರ ಬೇಕು ಅವರಲ್ಲಿ ದೇಶ ಪ್ರೇಮ ಹೇಗಿರಬೇಕು ಇದೆಲ್ಲ ವನ್ನು ಜಾನಪದ ಹಾಡಿನ ಮೂಲಕ ಹಾಡಿ ಸಧ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಸಖತ್ ಧೂಳೆಬ್ಬಿಸಿದ್ದಾರೆ ಧಾರವಾಡದ ಕುರುಬ ಗಟ್ಟಿ ಗ್ರಾಮದ ಜಾನಪದ ಕಲಾವಿದ ರಮೇಶ ಮಲ್ಲೇಬಿ
ಹೌದು ಮನಿ ಮನಿ ಮ್ಯಾಲೆ ತ್ರಿವರ್ಣ ಬಾವುಟ ಸದಾ ಹಾರ ಬೇಕು.ದಮಣಿ ದಮಣಿಯಲ್ಲಿ ದೇಶ ಭಕ್ತಿಯ ಕಾವು ಏರ ಬೇಕು ಎನ್ನುತ್ತಾ ಅಧ್ಬುತವಾಗಿ ಜಾನಪದ ಹಾಡನ್ನು ಹಾಡಿ ದ್ದಾರೆ ಕಲಾವಿದ ಗಾಯಕ ರಮೇಶ್…..
ಪ್ರಧಾನಿ ಅವರ ಕರೆಗೆ ದೇಶವಾಸಿಗಳ ಸ್ಪಂದನೆ ವರ್ಣಿಸಲು ಅಸಾಧ್ಯವಾಗಿದ್ದು ನಮ್ಮ ಧಾರವಾಡ ತಾಲೂಕಿನ ಕುರುಬ ಗಟ್ಟಿ ಗ್ರಾಮದ ಭಜನಾ ಮಂಡಳಿಯ ರಮೇಶ ಮಲ್ಲೇದಿ ಮತ್ತು ತಂಡದವರಿಂದ ರಚಿತವಾದ ಆಜಾದೀ ಕಾ ಅಮೃತ ಮಹೋತ್ಸದ ’ಹರ ಘರ ತಿರಂಗಾ’ ’ ಮನೆ ಮನೆಯಲ್ಲಿ ತ್ರಿವರ್ಣ ಧ್ವಜದ’ ಜಾಗೃತಿಗಾಗಿ ಗ್ರಾಮೀಣ ಸೊಗಡಿನಲ್ಲಿ ಮೂಡಿಬಂದ ಈ ರಾಷ್ಟ್ರಭಕ್ತಿ ಗೀತೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧಾರವಾಡದ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಕೇಳಿ ತಮ್ಮ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ