ಧಾರವಾಡ –
ಧಾರವಾಡದಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾ ಚರಣೆ ಮಾಡಿದ್ದಾರೆ ಹೌದು ನಗರದ ಬೂಸಪ್ಪ ಚೌಕ್ ನಲ್ಲಿ ಬಿಂದಾಸ್ ಆಗಿ ಜೂಜಾಟದಲ್ಲಿ ತೊಡಗಿದ್ದ ಅಡ್ಡೆಯ ಮೇಲೆ ದಾಳಿ ಮಾಡಿ ಹತ್ತು ಜನರನ್ನು ಬಂಧನ ಮಾಡಿ ದ್ದಾರೆ.ಹೌದು ಮೊದಲ ಬಾರಿಗೆ ಧಾರವಾಡದ ವಾರ್ಡ್ 17 ರಿಂದ ಕಾಂಗ್ರೇಸ್ ಪಕ್ಷದಿಂದ ಪಾಲಿಕೆಯ ಸದಸ್ಯರಾಗಿದ್ದ ಗಣೇಶ ಮುಧೋಳ ಸೇರಿದಂತೆ ಒಟ್ಟು 10 ಜನರನ್ನು ಸಿಸಿಬಿ ಪೊಲೀಸರು ಬಂಧನ ಮಾಡಿದ್ದಾರೆ.
ಸಿಸಿಬಿ ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ನೇತ್ರತ್ವದಲ್ಲಿ ನಡೆದ ಈ ಒಂದು ಕಾರ್ಯಾಚರಣೆಯಲ್ಲಿ ಹತ್ತು ಜನರನ್ನು ಬಂಧನ ಮಾಡಿ ಬಂಧಿತರಿಂದ 1 ಲಕ್ಷ 2 ಸಾವಿರ ರೂಪಾಯಿ ಗಳನ್ನ ವಶಕ್ಕೆ ತಗೆದುಕೊಳ್ಳಲಾಗಿದ್ದು ಇನ್ನೂ ಸಧ್ಯ ಈ ಕುರಿತಂತೆ ನಗರದ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಸಿಸಿಬಿ ಪೊಲೀಸರ ದೂರಿನ ಹಿನ್ನಲೆಯಲ್ಲಿ ಶಹರ ಠಾಣೆ ಪೊಲೀಸರು ಪ್ರಕರಣ ವನ್ನು ತಗೆದುಕೊಂಡು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.ಒಟ್ಟಾರೆ ಜನಪ್ರತಿನಿಧಿಗಳಾದವರು ಜವಾಬ್ದಾರಿ ಯುತವಾದ ಸ್ಥಾನದಲ್ಲಿ ಜನರ ಸೇವೆಯನ್ನು ಮಾಡಬೇ ಕಾದವರೇ ಹೀಗೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂಬೊದಕ್ಕೆ ಅವರೇ ಉತ್ತರಿಸಬೇಕು.