ಹುಬ್ಬಳ್ಳಿ –
ವಾರ್ಡ್ 41 ರಲ್ಲಿ ವಿಶೇಷ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ – ಪಾಲಿಕೆಯ ಸದಸ್ಯ ಸಂತೋಷ ಚವ್ಹಾಣ ಅವರಿಗೆ ಕೈ ಜೋಡಿಸಿದ್ರು ಪೌರ ಕಾರ್ಮಿಕರು ಪಾಲಿಕೆಯ ಅಧಿಕಾರಿಗಳು ಹೌದು
ಹುಬ್ಬಳ್ಳಿಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ವಿಶೇಷ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಆರಂಭಗೊಂಡಿದೆ.ಹೌದು ನಗರದ ಬೇರೆ ಬೇರೆ ಕಡೆಗಳಲ್ಲಿ ಈ ಒಂದು ವಿಶೇಷ ಕಾರ್ಯಕ್ರಮ ನಡೆಯುತ್ತಿದ್ದು ವಾರ್ಡ್ 41 ರಲ್ಲೂ ಕೂಡಾ ವಿಶೇಷ ಸ್ವಚ್ಚತಾ ಅಭಿಯಾನ ಕಾರ್ಯ ಕ್ರಮ ನಡೆಯಿತು.
ವಲಯ ಸಂಖ್ಯೆ-6 ರ ವ್ಯಾಪ್ತಿಯಲ್ಲಿನ ವಾರ್ಡ್ ಸಂಖ್ಯೆ-41 ರಲ್ಲಿ ಪಾಲಿಕೆಯ ವತಿಯಿಂದ ಈ ಒಂದು ವಿಶೇಷ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.ಪಾಲಿಕೆಯ ಸದಸ್ಯ ಸಂತೋಷ ಚೌವ್ಹಾಣ ಈ ಒಂದು ಅಭಿಯಾನಕ್ಕೆ ಚಾಲನೆ ನೀಡಿದರು.ಪೌರ ಕಾರ್ಮಿಕರೊಂದಿಗೆ ಸ್ವಚ್ಚತೆಯನ್ನು ಮಾಡುತ್ತಾ ಕಾರ್ಯಕ್ರಮಕವನ್ನು ಉದ್ಘಾಟಿಸಿದರು.ಈ ಒಂದು ಸಂದರ್ಭದಲ್ಲಿ ವಲಯದ ಹಲವೆಡೆ ಪೌರ ಕಾರ್ಮಿಕರು ಸೇರಿ ದಂತೆ ಹಲವರು ಸ್ವಚ್ಚತೆಯನ್ನು ಮಾಡುತ್ತಾ ನಮ್ಮೊಂದಿಗೆ ನಮ್ಮ ಸುತ್ತ ಮುತ್ತಲಿನ ಪರಿಸರ ವನ್ನು ಕೂಡಾ ಸ್ವಚ್ಚಂತವಾಗಿ ಇಟ್ಟುಕೊಳ್ಳಬೇಕು ಎಂಬ ಸಂದೇಶವನ್ನು ಸಾರ್ವಜನಿಕರಿಗೆ ನೀಡಿದರು
ಈ ಒಂದು ಸಂದರ್ಭದಲ್ಲಿ ಪಾಲಿಕೆಯ ಸದಸ್ಯ ರಾದ ಸಂತೋಷ ಚವ್ಹಾಣ ಅವರೊಂದಿಗೆ, ವಲಯ ಆಯುಕ್ತರಾದ ಎಸ್ ಸಿ ಬೇವೂರ, ಆರೋಗ್ಯ ಅಧಿಕಾರಿಗಳಾದ ಪ್ರಶಾಂತ ಮನ ಗುತ್ತಗಿ,ದಿಶ್ಯಾನ್,ದೇವಪ್ಪ,ಕಾರ್ಯ ನಿರ್ವಾಹಕ ಅಭಿಯಂತರರು ಹಾಗೂ ಆರೋಗ್ಯ ನಿರೀಕ್ಷಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು
ಇದರೊಂದಿಗೆ ಹೊಸದೊಂದು ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ಸದಸ್ಯರು ಅಧಿಕಾರಿಗಳು ಚಾಲನೆ ನೀಡಿದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..