ಹುಬ್ಬಳ್ಳಿ –
ಹೌದು ಇಂತಹದೊಂದು ಭಾವೈಕ್ಯತೆಗೆ ಸಾಕ್ಷಿ ಯಾಗಿದೆ ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆ ಅದರಲ್ಲೂ ಠಾಣೆಯ ಇನ್ಸ್ಪೆಕ್ಟರ್ ಮಾಡಿರುವ ಕೆಲಸ ನೋಡಿದರೆ ತುಂಬಾ ತುಂಬಾ ಖುಷಿಯಾಗುತ್ತದೆ ಸಧ್ಯ ಬಂದಿರುವ ಗಣೇಶ ಹಬ್ಬ ದಲ್ಲಿ ಠಾಣೆ ಯಲ್ಲಿ ಗಣೇಶ ನನ್ನು ಪ್ರತಿಷ್ಠಾ ಪನೆ ಮಾಡುವ ಮೂಲಕ ಜಾತಿ-ಧರ್ಮಗಳ ಗೋಡೆ ಕಟ್ಟಿಕೊಂಡವರ ಮಧ್ಯೆ ಭಾವೈಕ್ಯತೆ ಮೆರೆದಿದ್ದಾರೆ ಇನ್ಸ್ಪೆಕ್ಟರ್ ಜಾಕೀರ ಪಾಷಾ ಕಾಲಿಮಿರ್ಚಿ.
ಠಾಣೆಯ ಸಿಬ್ಬಂದಿ ಸಮಾಜದಲ್ಲಿ ಸರ್ವಧರ್ಮ ಭಾವೈಕ್ಯ ತೆಯೇ ಮುಖ್ಯ ಎನ್ನುವ ಮಾತಿಗೆ ಹುಬ್ಬಳ್ಳಿ ಗೊಕುಲ್ ರೋಡ್ ಪೊಲೀಸ್ ಠಾಣಾ ಮುಖ್ಯಾಧಿಕಾರಿ ಜಾಕೀರ ಪಾಷಾ ಕಾಲಿಮಿರ್ಚಿ ಅವರು ಮತ್ತು ಠಾಣೆಯ ಎಲ್ಲಾ ಸಿಬ್ಬಂದಿ ತಾವೇ ಸ್ವತಃ ಗಣೇಶ ನನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಸಾಮಾಜಿಕ ಭಾವೈಕ್ಯತೆ ಮೆರೆದಿದ್ದಾರೆ
ಹೌದು ಸದಾ ಸಾಮಾಜಿಕ ಮಾದರಿ ಕಾರ್ಯ ಗಳ ಮೂಲಕ ಹೆಸರಾದ ಗೊಕುಲ್ ರೋಡ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಾಕೀರಪಾಷಾ ಕಾಲಿಮಿರ್ಚಿ ಇಂದು ಸ್ವತಃ ತಾವೇ ತಮ್ಮ ಠಾಣೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿ ದ್ದಾರೆ ಹಣೆಗೆ ತಿಲಕ ಇಟ್ಟು ಕೊಂಡು ಕೈಯಲ್ಲಿ ಗಣೇಶ ಮೂರ್ತಿ ಹಿಡಿದು ಪೊಲೀಸ್ ಜೀಪಿನಲ್ಲಿ ತೆರಳಿ ಪ್ರತಿಷ್ಠಾ ಪನೆ ಮಾಡುವ ಮೂಲಕ ಜಾತಿ-ಧರ್ಮಗಳ ಗೊಡೆ ಕಟ್ಟಿ ಕೊಂಡವರ ಮಧ್ಯೆ ಭಾವೈಕ್ಯತೆ ಗೆ ಏಕರೂಪ ನೀಡಿದ್ದಾರೆ.
ಇವರ ಈ ಒಂದು ಕಾರ್ಯಕ್ಕೆ ಠಾಣೆಯ ಎಲ್ಲಾ ಸಿಬ್ಬಂದಿ ಸಾಥ್ ನೀಡಿದ್ದಾರೆ.ಹೀಗಾಗಿ ಗೋಕುಲ್ ರೋಡ್ ಪೋಲಿಸ್ ಠಾಣಾಧಿಕಾರಿಯ ಮತ್ತು ಸಿಬ್ಬಂದಿ ಗಳ ಮಾದರಿ ಕಾರ್ಯಕ್ಕೊಂದು ಸಲಾಂ.
ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ವಿಶೇಷವಾಗಿ ಡ್ರೇಸ್ ನಲ್ಲಿ ಆಗಮಿಸಿ ಠಾಣೆಯಲ್ಲಿ ಗಣೇಶೋತ್ಸವ ಆಚರಣೆ ಮಾಡಿದರು ಇದರೊಂದಿಗೆ ಭಾವೈಕ್ಯ ಗೆ ಸಾಕ್ಷಿಯಾದರು ಹುಬ್ಬಳ್ಳಿಯ ಗೋಕುಲ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಇವರೊಂದಿಗೆ ಚಾರ್ಲಿ ಅವರ ಕೆಲಸಕ್ಕೆ ಸೈ ಅಂದರು ಠಾಣೆ ಯ ಸಿಬ್ಬಂದಿ
ಹುಬ್ಬಳ್ಳಿಯ ಪೊಲೀಸ್ ಇನ್ಸ್ಪೆಕ್ಟರ್ ಜಾಕಿರ್ ಬಾಷಾ ರಿಂದ ಸಂಭ್ರಮದ ಗಣೇಶ ಚತುರ್ಥಿ ಈ ವರ್ಷವೂ ಪೊಲೀಸ್ ಠಾಣೆ ಯಲ್ಲಿ ಅದ್ದೂರಿಯಾಗಿ ಕಂಡು ಬಂದಿತು. ಠಾಣೆ ಯಲ್ಲಿ ಪಂಚೆ ಶರ್ಟ್ ಧರಿಸಿ,ಸತ್ಯ ನಾರಾಯಣ ಪೂಜೆ ನೆರವೇರಿಸಿದ ಜಾಕಿರ್ ಬಾಷಾ ಕಾಲಿಮಿರ್ಚಿ ಹಾಗೂ ಸಿಬ್ಬಂದಿ.
ಹುಬ್ಬಳ್ಳಿಯ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಮನೆ ಮಾಡಿದ ಗಣೇಶ ಚತುರ್ಥಿ ಸಂಭ್ರಮ. ಸಾಂಪ್ರದಾ ಯಿಕ ಉಡುಗೆ ತೊಟ್ಟು ಕೆಲ ಹೊತ್ತು ಹಬ್ಬದ ಸಂಭ್ರಮ ಪಟ್ಟು ಖಾಕಿ ಟಿಮ್ ಸಂಭ್ರಮಿಸಿದರು.
ಅಲ್ಪ ಸಂಭ್ರಮದ ನಂತರ ಮತ್ತೆ ಬಂದೋಬಸ್ತ್ ಡ್ಯೂಟಿಗೆ ಹಾಜರಾದರು ಠಾಣೆ ಯ ಅಧಿಕಾರಿಗಳು ಮತ್ತು ಪೊಲೀಸ್ ಟೀಮ್ ಸಿಬ್ಬಂದಿ.ಪೊಲೀಸ್ ಸಿಬ್ಬಂದಿಯ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಕೂಡ ಪೂಜೆಯಲ್ಲಿ ಭಾಗಿಯಾಗಿ ದ್ದು ವಿಶೇಷವಾಗಿ ಕಂಡು ಬಂದಿತು.