This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

Local News

ಧಾರವಾಡದ ಪ್ರತಿಷ್ಠಿತ JSS ಮಹಾವಿದ್ಯಾಲಕ್ಕೆ ನ್ಯಾಕ್ ನಿಂದ A+ ಮಾನ್ಯತೆ – ರಾಷ್ಟ್ರೀಯ ಮೌಲ್ಯಾಂಕನ ಮತ್ತು ಗುಣಮಟ್ಟದ ಸಂಸ್ಥೆಯ ಗ್ರೇಡ್ ಗೆ ಸಂತಸ ಎಂದರು ಜೆ.ಎಸ್.ಎಸ್ ಸಂಸ್ಥೆಯವರು…..

WhatsApp Group Join Now
Telegram Group Join Now

ಧಾರವಾಡ –

ಧಾರವಾಡದ ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಜ್ಜ ವಿಜ್ಞಾನ ಕಾಲೇಜ್ 2021 ರವರೆಗೆ ಸಲ್ಲಿಸಿದ ಸ್ವಯಂ ಮೌಲ್ಯಮಾಪನ ಮಹಾವಿದ್ಯಾ ಲಯಕ್ಕೆ 2016 ವರದಿಯನ್ನಾಧಲಿಸಿ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಗುಣಮಟ್ಟ ಸಂಸ್ಥೆಯು (ನ್ಯಾಕ್, NAAC), ಮೌಲ್ಯಮಾಪನ ಮಾಡಿ A+ (CGPA-3.34) ಗ್ರೇಡನ್ನು ನೀಡಿದೆ ಎಂದು ಜೆ.ಎಸ್.ಎಸ್ ವಿತ್ತಾಧಿಕಾರಿಗ ಳಾದ ಡಾ. ಅಜಿತಪ್ರಸಾದ ತಿಳಿಸಿದರು.ಕಾಲೇಜ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಮೂರು ಬಾರಿ ಮಹಾವಿದ್ಯಾಲಯವು ಸತತವಾಗಿ “A” ಗ್ರೇಡನ್ನು ಪಡೆಯುತ್ತ ಬಂದಿದೆ.ಮೊದಲನೆ,ಎರಡನೇ,ಮೂರನೇ ಬಾರಿಯೂ ‘A’ ಗ್ರೇಡನ್ನು ಪಡೆದಿದ್ದು,ನಾಲ್ಕನೇ ಬಾರಿ ಅದಕ್ಕಿಂತ ಹೆಚ್ಚಿನ A+ ಗ್ರೇಡ ನ್ನು CGPA- 3.34 ಗಳೊಂದಿಗೆ ಪಡೆದು ತನ್ನ ಗುಣಮಟ್ಟವನ್ನು ಉತ್ತಮಗೊಳಿ ಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದರು.

ರಾಷ್ಟ್ರೀಯ ಮೌಲ್ಯಾಂಕನ ಮತ್ತು ಗುಣಮಟ್ಟ (ನ್ಯಾಕ್, NAAC) ಸಂಸ್ಥೆಯು ಮೂರು ಜನರ ಸಮಿತಿಯನ್ನು ರಚಿಸಿ ಮಹಾವಿದ್ಯಾಲಯಕ್ಕೆ ದಿನಾಂಕ 13.06.2022 ಮತ್ತು 14.06.2022 ರಂದು ಕಳುಹಿಸಲಾಗಿತ್ತು. ಸಮಿತಿ ಯ ಚೇರಮನ್ನರಾಗಿ ಇಂಫಾಲ್ (ಮಣಿಪುರ) ನ IIIT ಯ ನಿರ್ದೇಶಕರಾದ ಪ್ರೊ. ಕೃಷ್ಣನ್ ಭಾಸ್ಕರ ಅವರು, ಸಂಯೋ ಜಕ ಸದಸ್ಯರಾಗಿ ಆಸ್ಸಾಂನ ಬೋಡೋಲ್ಯಾಂಡ ವಿಶ್ವವಿದ್ಯಾ ಲಯದ ಪ್ರೊ. ಎರಗಬಾಮ್ ನಿಕ್ಸಾನ್ ಸಿಂಗ್ ಅವರು ಹಾಗೂ ಸದಸ್ಯರಾಗಿ ಪಂಜಾಬ್ ನ ಹೋಷಿಯಾರ್‌ಪುರದ ಸನಾತನ ಧರ್ಮ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ನಂದ ಕಿಷೋರ ಅವರು ಆಗಮಿಸಿದ್ದರು ಎಂದರು.

ಇನ್ನೂ ಕಳೆದ ಬಾರಿಗಿಂತ ಈ ಬಾರಿ ಉತ್ತಮ ಗ್ರೇಡ್ ಬರಲು 2016 ರಿಂದ 2021ರ ಈ ಐದು ವರ್ಷಗಳ ಅವಧಿಯಲ್ಲಿ 24 ವಿದ್ಯಾರ್ಥಿಗಳು ಬ್ಯಾಂಕ್ ಪಡೆದಿದ್ದು, 9 ಚಿನ್ನದ ಪದಕ ಪಡೆದಿದ್ದಾರೆ.ರಾಷ್ಟ್ರೀಯ ಮತ್ತು ಅಂತರಾ ಷ್ಟ್ರೀಯ ಮಟ್ಟದಲ್ಲಿ ನಡೆದ 224 ಕ್ರೀಡಾ ಸ್ಪರ್ಧೆಗಳಲ್ಲಿ 479 ವಿದ್ಯಾರ್ಥಿಗಳು ಭಾಗವಹಿಸಿ 158 ಪಾರಿತೋಷಕ ಪದಕಗಳು.147 ವಿಶ್ವವಿದ್ಯಾಲಯ ಮಟ್ಟದ ಯೂನಿವ ರ್ಸಿಟಿ ಬ್ಲೂ ಗಳಾಗಿ ಆಯ್ಕೆಯಾಗಿದ್ದಾರೆ ಎಂದರು. ಲಲಿತ ಕಲಾ ಸಂಘದ ವತಿಯಿಂದ ರಾಷ್ಟ್ರ ಮತ್ತು ಅಂತರಾಷ್ಟ್ರೀ ಯ ಮಟ್ಟದಲ್ಲಿ ಭಾಗವಹಿಸಿ, ಪ್ರಶಸ್ತಿ ಪಡೆದಿದ್ದಾರೆ. ಕಾಲೇಜಿನ ಎನ್.ಎಸ್.ಎಸ್.ಘಟಕವು ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ರಾಷ್ಟ್ರಪತಿ ಶ್ರೀ ರಾಮನಾಥ ಕೋವಿಂದ್‌ ರವರಿಂದ ಪಡೆದಿದೆ. ಈ ಪ್ರಶಸ್ತಿ 1 ಲಕ್ಷ ರೂ. ನಗದು ಬಹುಮಾನ ಹಾಗೂ ಫಲಕವನ್ನು ಒಳಗೊಂಡಿದೆ. ಜೆ.ಎಸ್ ಎಸ್ ನ ಎನ್.ಎಸ್.ಎಸ್ ಅಧಿಕಾರಿಗೆ ಅತ್ಯುತ್ತಮ ಎನ್.ಎಸ್.ಎಸ್. ಅಧಿಕಾರಿ ಪ್ರಶಸ್ತಿಯೂ ಸಹ ಲಭಿಸಿ ರುತ್ತದೆ ಎಂದರು.ಇನ್ನೂ ಮಹಾವಿದ್ಯಾಲಯದ ಪ್ರಾಧ್ಯಾಪ ಕರು ಉತ್ತಮ ರೀತಿಯಲ್ಲಿ ಸಂಶೋಧನೆ,ಪುಸ್ತಕ ಪ್ರಕಟ ಣೆಗಳಲ್ಲಿ ಭಾಗಿಯಾಗಿದ್ದು, ಪ್ರಾಧ್ಯಾಪಕರು 136 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಹಾಗೂ 100ಕ್ಕೂ ಪ್ರಕಟಿಸಿದ್ದಾರೆ. ಹೆಚ್ಚು ಪುಸ್ತಕಗಳನ್ನು ಜೆ.ಎಸ್.ಎಸ್ ನ ಪ್ರಾಧ್ಯಾಪಕರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ವಿಚಾರ ಕೂಡ ಭಾಗವಹಿಸಿರುತ್ತಾರೆ. ಸಂಕಿರಣಗ ಳಲ್ಲಿಯೂ ಐದು ವರ್ಷಗಳ ಅವಧಿಯಲ್ಲಿ ಮೂರು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಒಂದು ಕೋಟ ರೂಪಾಯಗಳಗಿಂತಲೂ ಹೆಚ್ಚು ಶಿಷ್ಯವೇತನಕ್ಕೆ ಭಾಜನರಾ ಗಿದ್ದಾರೆ.ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಪ್ರಾಯೋಜಿತ INSPIRE Scholarship ಪ್ರತಿ ವಿದ್ಯಾರ್ಥಿಗೆ ವರ್ಷಕ್ಕೆ ರೂ.80,000/-ದಂತೆ ಶಿಷ್ಯವೇತನ ನೀಡುತ್ತದೆ. ಈ ಸೌಲಭ್ಯಕ್ಕೆ ನಮ್ಮ ಮಹಾವಿದ್ಯಾಲವಿಂದ ಒಟ್ಟು 07 ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆದು ಕೊಂಡಿದ್ದಾರೆ.ಆಡಳಿತ ಮಂಡಳಿಯು ಅತ್ಯುತ್ತಮ ಕ್ರೀಡಾ ಪಟುಗಳಿಗೆ, ಇತರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೂನ್ಯ ಶುಲ್ಕದಡಿಯಲ್ಲಿ ಪ್ರವೇಶ ನೀಡಿವೆ. ಇದರಿಂದ ಪತ್ಯೇತರ ಚಟುವಟಿಕೆಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡಲು ಸಾಧ್ಯವಾ ಗಿದೆ.ವಿದ್ಯಾರ್ಥಿಗಳು ಅತ್ಯಂತ 12.ಪತ್ಯೇತರ ಜೊತೆಗೆ, ಕೋರ್ಸುಗಳನ್ನು ವಿವಿಧ ವಿಷಯಗಳಲ್ಲಿ ಸರ್ಟಿಫಿಕೇಟ್ ಪ್ರಾರಂಭಿಸಿರುವದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗಾ ವಕಾಶ ಹೆಚ್ಚಾಗಿದೆ ಎಂದರು ಹಲವಾರು ಕಂಪನಿಗಯವರು ಕ್ಯಾಂಪಸ್ ಸಂದರ್ಶನಗಳನ್ನು ಏರ್ಪಡಿಸಿ, ವಿದ್ಯಾರ್ಥಿಗ ಳನ್ನು ಉದ್ಯೋಗಕ್ಕೆ ಆಯ್ಕೆಮಾಡಿಕೊಂಡಿದ್ದಾರೆ ಮಹಾ ವಿದ್ಯಾಲಯದಲ್ಲಿ ಮೂರು ಸ್ನಾತಕೋತ್ತರ ಕೋರ್ಸ್‌ ಗಳು(ರಸಾಯನಶಾಸ್ತ್ರ, ವಾಣಿಜ್ಯಶಾಸ್ತ್ರ, ಭೌತಶಾಸ್ತ್ರ) ಲಭ್ಯವಿರುತ್ತವೆ. ಈ ಸ್ನಾತಕೋತ್ತರ ವಿಭಾಗದಲ್ಲಿ ಈ ಬಾರಿ ನಮಗೆ ಬ್ಯಾಂಕುಗಳು ಸಹ ಲಭಿಸಿವೆ. ಮಹಾವಿದ್ಯಾಲ ಯವು ಅತ್ಯುತ್ತಮ ಪ್ರಯೋಗಾಲಯಗಳನ್ನು ಹೊಂದಿದೆ. ಅಲ್ಲದೇ, ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆ ಗ್ರಂಥಾಲಯ, ಐ.ಸಿ.ಟಿ ಯನ್ನೊಳಗೊಂಡ ಕೊಠಡಿಗಳು,ನಾಲ್ಕು ವಿದ್ಯಾರ್ಥಿ ನಿಯರ ವಸತಿ ನಿಲಯಗಳು,ಎರಡು ವಿದ್ಯಾರ್ಥಿ ವಸತಿ ನಿಲಯಗಳು, ಎರಡು ಆಟದ ಮೈದಾನಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಜಿಮ್ ಕೇಂದ್ರ ಗಳು,ಆರೋಗ್ಯ ಕೇಂದ್ರ, ಎರಡು ಬ್ಯಾಂಕ್‌ ಗಳು, ಪೋಸ್ಟ್ ಆಫೀಸ್, ಮೂರು ಹವಾನಿಯಂತ್ರಿತ ಸಭಾಭವನ ಗಳು ಬಯಲು ರಂಗ ಮಂದಿರಗಳ ಸೌಲಭ್ಯ ಗಳನ್ನು ಹೊಂದಿದೆ ಎಂದರು.16.2022-2023ರ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ಗಣಿತಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಲಾಗಿದೆ. ಈ ಎಲ್ಲ ಅಂಶಗಳು ಮಹಾವಿದ್ಯಾಲಯಕ್ಕೆ A+ ಗ್ರೇಡ ಪಡೆಯುವಲ್ಲಿ ಪೂರಕ ವಾಗಿವೆ.ಮಹಾವಿದ್ಯಾಲಯ ನ್ಯಾಕ್ ನ ನಾಲ್ಕನೇ ಆವೃತ್ತಿ ಯ ಮೌಲ್ಯಮಾಪನದಲ್ಲಿ A+ ಗ್ರೇಡ ಪಡೆದಿದೆ ಎಂದರು ಶ್ರೀಕ್ಷೇತ್ರ, ಧರ್ಮಸ್ಥಳ, ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರ ಮಾತನಾಡಿ, ಸುಸಂಧರ್ಭದಲ್ಲಿ ಜನತಾ ಶಿಕ್ಷಣ ಸಮಿತಿಯ ಗೌರವ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮಿಗಳು, ಪೇಜಾವರಮಠ, ಉಡುಪಿ, ಕಾರ್ಯಾಧ್ಯಕ್ಷರಾದ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಶುಭಕೋರುವುದಾಗಿ ಹೇಳಿದರು ಪತ್ರಿಕಾಗೋಷ್ಠಿಯಲ್ಲಿ ಪ್ರಾಚಾರ್ಯ ಶ್ರೀಮತಿ ಇಂದು ಪಂಡಿತ, ಡಾ. ಸೂರಜ ಜೈನ್, ಪ್ರೊ.ಮಹಾವೀರ ಉಪಾದ್ಯಾಯ,ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿ ತರಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk