ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ ಧಾರವಾಡದ ಕುಮಾರೇಶ್ವರ ನಗರದ ಬನಶಂಕರಿ ಬಡಾವಣೆಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಗಳನ್ನು ಆಲಿಸಿದರು.ಇದೇ ವೇಳೆ ನಿವಾಸಿಗಳು ಮೇಯರ್ ಆಗಿ ಮೊದಲ ಬಾರಿಗೆ ವಾರ್ಡ್ ಗೆ ಬಂದ ಸಮಯದಲ್ಲಿ ಸ್ವಾಗತ ಮಾಡಿಕೊಂಡರು
ಬಡಾವಣೆಗೆ ಬರಮಾಡಿಕೊಂಡು ನಂತರ ಇದೇ ಸಂದರ್ಭ ದಲ್ಲಿ ಬಡಾವಣೆಯ ನಾಗರೀಕರೊಂದಿಗೆ ಸೇರಿ ಬಡಾವಣೆ ಯನ್ನು ವೀಕ್ಷಿಸಿ ಅಲ್ಲಿಯ ಸಮಸ್ಯೆಗಳ ಬಗ್ಗೆ ಅಲ್ಲಿನ ಹಿರಿಯ ನಾಗರೀಕರೊಂದಿಗೆ ಚರ್ಚಿಸಿ ಮನವಿ ಪತ್ರವನ್ನು ಸ್ವೀಕರಿಸಲಾಯಿತು.
ನಂತರ ಸರ್ಕಾರ ಮಹಾನಗರದ ಅಭಿವೃದ್ಧಿ ಕಾರ್ಯಕ್ಕೆ ಏನೆಲ್ಲಾ ಯೋಜನೆಗಳನ್ನು ಕೈಗೊಂಡಿದೆ ಎಂಬುದರ ಬಗ್ಗೆ ತಿಳಿಸಿ,ಶೀಘ್ರವೇ ಸಮಸ್ಯೆಗಳಿಗೆ ಪರಿಹಾರ ಭರವಸೆಯನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಬಡಾವಣೆಯ ಅಧ್ಯಕ್ಷ ರಾದ ಜವರೇಗೌಡರವರು,ಬಸವರೆಡ್ಡಿ ಚಿತ್ತಾಪೂರ, ರುದ್ರಪ್ಪ ಉಳ್ಳಾಗಡ್ಡಿ,ಜಗದೀಶ ತಿಬೇಲಿ, ಮೆಣಸಿನಕಾಯಿ ರವರು ಹಾಗೂ ಬಡಾವಣೆಯ ನಾಗರಿಕರು ಉಪಸ್ಥಿತ ರಿದ್ದರು.