ಧಾರವಾಡ –
ಧಾರವಾಡದ.ವಿವಿಧ ವಾರ್ಡ್ ಗಳಲ್ಲಿ ಅಭಿವೃದ್ಧಿ ಕಾಮಾಗಾರಿಗಳಿಗೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು ವಾರ್ಡ್ ನಂಬರ್ 3 ಹಾಗೂ 7 ರಲ್ಲಿ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು
ವಾರ್ಡ್ ನಂಬರ್ 3 ರಲ್ಲಿ ಬರುವ ಮಂಗಳಗಟ್ಟಿ ಪ್ಲಾಟ್ನಲ್ಲಿ ಚರಂಡಿ ಹಾಗೂ ರಸ್ತೆ ಕಾಮಗಾರಿ ಕುಮಾರೇಶ್ವರನಗರದಲ್ಲಿ ಬರುವ ಒಳರಸ್ತೆಗಳು, ಉಪರಸ್ತೆಗಳು ಹಾಗೂ ಪಕ್ಕಾ ಗಟಾರ ನಿರ್ಮಾಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ಅಲ್ಲದೇ ವಾರ್ಡ್ ನಂಬರ್ 7 ರಲ್ಲಿ ಬರುವ ಜೈ ಜಿನೇಂದ್ರ ಕಾಲೊನಿ ರಸ್ತೆ ಅಭಿವೃದ್ಧಿ ಹಾಗೂ ಮಂಡ ಓಣಿಯಿಂದ ಹೊಸ ಓಣಿ ಸರ್ಕಲ್ವರೆಗೆ ತೆರೆದ ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು ಈ ಒಂದು ಸಂದರ್ಭದಲ್ಲಿ ಸಂತೋಷ ದೇವರಡ್ಡಿ, ಹೇಮಂತ ನೀಲಣ್ಣವರ, ಅಶೋಕ ದೇಶಪಾಂಡೆ, ಮಾದು ಅಳಗವಾಡಿ, ಜಯತೀರ್ಥ ಮಳಗಿ,ಹರೀಶ ಬಿಜಾಪುರ,ರಾಕೇಶ್ ದೊಡಮನಿ,ಬಸವರಾಜ್ ರುದ್ರಾಪುರ ಸೇರಿದಂತೆ ಅನೇಕರು ಉಪಸ್ಥಿತರಿ ದ್ದರು.