ಧಾರವಾಡ-
ಸದಾ ಒಂದಿಲ್ಲೊಂದು ವಿಶೇಷ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಿರುವ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಎಲ್ಲರಿಗೂ “ಧಣಿ” ಎಂದೇ ಚಿರಪರಿಚಿತಚಾದ ಅಮೃತ ದೇಸಾಯಿ ಅವರಿಗೆ ನಾಳೆ ಅಂದರೆ ನವೆಂಬರ್ 16 ಹುಟ್ಟು ಹಬ್ಬದ ಸಂಭ್ರಮ.
ಪ್ರತಿ ವರ್ಷ ಹುಟ್ಟು ಹಬ್ಬದ ದಿನದಂದು ವಿಶೇಷವಾಗಿ ಅದರಲ್ಲೂ ಅರ್ಥಪೂರ್ಣ ವಾಗಿ ಆಚರಣೆ ಮಾಡಿಕೊಂಡು ಬರುತ್ತಿರುವ ಇವರು ಈ ಬಾರಿ ಹುಟ್ಟು ಹಬ್ಬದ ಹಿನ್ನೆಲೆ ಯಲ್ಲಿ ಯಾವುದೇ ಶಾಲು,ಬ್ಯಾನರ್, ಬಂಟಿಂಗ್ಸ್ ಹಾಕದೇ ಅದೇ ಹಣದಲ್ಲಿ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ಕೊಡಿ ನಿಮ್ಮ ಜೊತೆಯಲ್ಲಿ ನಾನು ಭಾಗಿಯಾಗುತ್ತೆನೆ ಎಂದು ಸಂದೇಶದ ಬೆನ್ನಲ್ಲೇ ಈಗ ನಾಳೆಯ ಹುಟ್ಟು ಹಬ್ಬದ ದಿನದಂದು ಮತ್ತೊಂದು ಸಮಾಜ ಮೆಚ್ಚುವಂತಹ ನಿರ್ಧಾರ ವನ್ನು ತಗೆದುಕೊಂಡಿದ್ದಾರೆ
ಹೌದು ಹುಟ್ಟು ಹಿನ್ನೆಲೆಯಲ್ಲಿ ದಿನದಂದು ದಂಪತಿಗಳು ನೇತ್ರ ದಾನ ಮಾಡಲು ನಿರ್ಧಾರವನ್ನು ಅದು ದಂಪತಿ ಯೊಂದಿಗೆ ನಿರ್ಣಯವನ್ನು ತಗೆದುಕೊಂಡಿದ್ದಾರೆ. ಇದರೊಂದಿಗೆ ರಾಜಕೀಯ ದೊಂದಿಗೆ ರಾಜಕಾರಣಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಎನು ನಾವು ಹೇಗಿರಬೇಕು ಎಂಬೊಂದನ್ನು ಈ ಮೂಲಕ ತಗೆದುಕೊಂಡಿದ್ದು ನಾಳೆ ಅದನ್ನು ಅಧಿಕೃತವಾಗಿ ಹುಟ್ಟು ಹಬ್ಬದ ದಿನದಂದು ವೇದಿಕೆಯ ಮೇಲೆ ಘೋಷಣೆ ಮಾಡಲಿದ್ದಾರೆ ಒಟ್ಟಾರೆ ಪ್ರತಿಯೊಂದು ಕೆಲಸ ಕಾರ್ಯದಲ್ಲೂ ವಿಶೇಷ ವಾಗಿ ಸಮಾಜ ಮೆಚ್ಚುವಂತಹ ಕಾರ್ಯವನ್ನು ಮಾಡಿಕೊಂಡು ಮಾದರಿಯಾಗಿ ಕಂಡು ಬರುವ ಧಣಿ ಈಗ ಮತ್ತೊಮ್ಮೆ ದೊಡ್ಡ ಅದರಲ್ಲೂ ಅಂಧರ ಬಾಳಿಗೆ ತಮ್ಮ ನೇತ್ರಗಳನ್ನು ದಂಪತಿಗಳು ತಗೆದುಕೊಂಡಿದ್ದು ನಿಜವಾಗಿಯೂ ಮೆಚ್ಚು ವಂತಹದ್ದು