ಹುಬ್ಬಳ್ಳಿ –
ಮಗನಿಂದ ಬೇಸತ್ತಿದ್ದಾರೆ NWKSRTC ನಿಗಮದ ಅಧ್ಯಕ್ಷ ವಿ ಎಸ್ ಪಾಟೀಲ್.ಸ್ವಂತ ಮಗನೇ ತಮ್ಮ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆಂದು ಆರೋಪ ಈಗ ಕೇಳಿ ಬಂದ ಬೆನ್ನಲ್ಲೇ ಈ ಒಂದು ವಿಚಾರ ಕುರಿತು ಮಾಜಿ ಶಾಸಕರೇ ಸ್ಪಷ್ಟನೆ ನೀಡಿದ್ದಾರೆ.ಅಲ್ಲದೇ ಈ ಒಂದು ವಿಚಾರ ವು ಸತ್ಯವಾಗಿದ್ದು ಯಾರು ಕೂಡಾ ಹಣವನ್ನು ಕೊಡದಂತೆ ಸೂಚನೆ ಯೊಂದಿಗೆ ವಿನಂತಿ ಮಾಡಿಕೊಂಡಿದ್ದಾರೆ
ಮಗನಿಗೆ ಯಾರೂ ಸಾಲ ಕೊಡದಂತೆ ಸಾರ್ವಜನಿಕ ನೋಟಿಸ್ ನೀಡಿದ್ದಾರೆ.NWKSRTC ಲೆಟರ್ ಪ್ಯಾಡ್ ನಲ್ಲೇ ಮಗನ ಬಗ್ಗೆ ಸವಿಸ್ತಾರವಾಗಿ ಬರೆದು ಎಲ್ಲಾ ತಮ್ಮ ಅಸಮಾಧಾನವನ್ನು ನೋಡಿಕೊಂಡಿದ್ದಾರೆ.ವಿ.ಎಸ್. ಪಾಟೀಲ ಮಾಜಿ ಶಾಸಕರಾಗಿದ್ದು ಸಧ್ಯ NWKSRTC ಹಾಲಿ ಅಧ್ಯಕ್ಷರಾಗಿದ್ದಾರೆ.
ಬಾಪೂಗೌಡ ಪಾಟೀಲ ವಿ.ಎಸ್. ಪಾಟೀಲ ಅವರ ಪುತ್ರ ರಾಗಿದ್ದು ನನ್ನ ಮಗ ಮಾನಸಿಕ ಅಸ್ವಸ್ಥನಾಗಿದ್ದಾನೆ ದುಷ್ಶಟಕ್ಕೆ ಬಲಿಯಾಗಿ ತನ್ನ ಆಸ್ತಿಯನ್ನು ಹಾಳು ಮಾಡಿ ಕೊಂಡಿದ್ದಾನೆ.ಖಾತೆಯಲ್ಲಿ ಹಣ ಇಲ್ಲದಿದ್ದರೂ ಚೆಕ್ ನೀಡಿ ಸಾಲ ಪಡೀತಾನೆ.ನನ್ನ ಹೆಸರಿನ ದುರ್ಬಳಕೆ ಮಾಡಿಕೊಂ ಡಿದ್ದಾನೆ.ನನ್ನ ಹೆಸರು ಬಳಸಿ ಜನರಿಗೆ ಸುಳ್ಳು ಭರವಸೆ ನೀಡುತ್ತಿದ್ದಾನೆ.ಅವರಿಂದಲೂ ಸಾಲ ಪಡೆಯುತ್ತಿದ್ದಾನೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.ಆತನಿಗೆ ಯಾರೂ ಹಣ ನೀಡದಂತೆ ಪತ್ರದಲ್ಲಿ ಉಲ್ಲೇಖವನ್ನು ಮಾಡಿದ್ದಾರೆ.