ಬೆಂಗಳೂರು –
ಶಿಕ್ಷಕರ ವರ್ಗಾವಣೆ ಸೇರಿದಂತೆ ಎಲ್ಲಾ ಸಮಸ್ಯೆ ಗಳ ಕುರಿತು ಈವರೆಗೆ ರಾಜ್ಯ ಸರ್ಕಾರದಿಂದ ಕಾದು ಕಾದು ಬೇಸತ್ತು ಈಗ ಅನಿವಾರ್ಯ ವಾಗಿ ಈಗ ಹೋರಾಟ ಮಾಡೊದು ಬಂದಿದ್ದು ಅದಕ್ಕೆ ನಿಮ್ಮ ಅನುಮೋದನೆ ಬೇಕಿದೆ ಎಂದು ಕರ್ನಾಟಕ ರಾಜ್ಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು
ಹೌದು ಇಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯ ಪರಿಷತ್ ಮಹಾಸಭೆ ಯಲ್ಲಿ ಮಾತನಾಡಿದ ಅವರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವಿವಿಧ ಸಮಸ್ಯೆಗಳ ಕುರಿತು ಹೋರಾಟ ಮಾಡಲು ಸಭೆಯ ಅನುಮೋದನೆ ಬೇಕು ಎಂದರು.
ಈವರೆಗೆ ಸರ್ಕಾರದಲ್ಲಿ ಮಾಡತೇನಿ ಮಾಡತೇನಿ ಎನ್ನೊದೆ ಕೇಳಿದೆವು ನೋಡಿದೆವು ಆದರೆ ಸಮಸ್ಯೆ ಗಳು ಮಾತ್ರ ಪರಿಹಾರವಾಗಲಿಲ್ಲ ಹೀಗಾಗಿ ಶಿಕ್ಷಕರ ಸಮಸ್ಯೆ ಗಳ ಕುರಿತು ಒಂದು ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡ ಬೇಕು ಅದಕ್ಕೆ ಅನುಮೋದನೆ ಬೇಕು ಎಂದರು.
ಅಧ್ಯಕ್ಷರು ವೇದಿಕೆಯ ಮೇಲೆ ಹೀಗೆ ಮಾತಾಡುತ್ತಿದ್ದಂತೆ ಇತ್ತ ಸಭೆ ಯಲ್ಲಿ ಪಾಲ್ಗೊಂಡಿದ್ದ ಶಿಕ್ಷಕರೊಬ್ಬರು ಮಾಡಿ ಸಾರ್ ಎಂದರು.ಒಟ್ಟಾರೆ ನಾಡಿನ ಶಿಕ್ಷಕರ ಸಮಸ್ಯೆಗಳ ಕುರಿತು ಹೋರಾಟಕ್ಕೆ ವೇದಿಕೆ ಸಿದ್ದವಾಗುತ್ತಿದೆ.