ಹುಬ್ಬಳ್ಳಿ –
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಎರಡು ಕಡೆಗಳಲ್ಲಿ ಚಾಕು ಇರಿತವಾಗಿದೆ.ಹೌದು ಹಣಕಾಸು ವಿಚಾರ ಮತ್ತು ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ನಗರದ ಎರಡು ಕಡೆಗಳಲ್ಲಿ ಪ್ರತ್ಯೇಕ ವಾಗಿ ಚೂರಿ ಇರಿತ ಪ್ರಕರಣಗಳು ನಡೆದಿವೆ.ಹುಬ್ಬಳ್ಳಿಯ ಶ್ರೀನಗರ ಮತ್ತು ಇಬ್ರಾಹೀಂ ಪುರದಲ್ಲಿ ಈ ಒಂದು ಘಟನೆ ಗಳು ನಡೆದಿವೆ.ಹೆಗ್ಗೇರಿಯ ಸಲ್ಮೂನ ಶ್ಯಾಮ ಕಬಾಡೆ ಚಾಕು ಇರಿತಕ್ಕೀಡಾದವನಾಗಿದ್ದು ಅನೀಲ ಅಂಬರೀಶ ನಾಯಕ ಚಾಕುವಿನಿಂದ ಇರಿದ ಆರೋಪಿಯಾಗಿದ್ದು 50 ಸಾವಿರ ರೂಪಾಯಿ ಹಣಕಾಸಿನ ವಿಚಾರವಾಗಿ ಅನೀಲ ಜಗಳ ತೆಗೆದಿದ್ದ.ಬಳಿಕ ಎಡಗೈಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಸಧ್ಯ ಗಾಯಾಳುನನ್ನುಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಇನ್ನೂ ಸುದ್ದಿ ತಿಳಿದ ಹಳೇ ಹುಬ್ಬಳ್ಳಿ ಪೊಲೀಸ್ ರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿ ಮ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.ಇನ್ನೂ ಮತ್ತೊಂ ದೆಡೆ ಬ್ಲೇಡ್ನಿಂದ ಕುತ್ತಿಗೆಗೆ ಇರಿತವಾದ ಘಟನೆ ನಗರದಲ್ಲಿ ಮತ್ತೊಂದು ಕಡೆಗೆ ನಡೆದಿದೆ.ಕಸಬಾಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.ಹಳೇ ಹುಬ್ಬಳ್ಳಿಯ ಅರ್ಬಾಜ್ ಫಾಜಿಲ್ ಅತ್ತಾರ ಗಾಯಗೊಂಡ ವನಾಗಿದ್ದು ವ್ಯಕ್ತಿಯೊಬ್ಬ ಅರ್ಬಾಜ್ ಜೊತೆ ಯಾವುದೋ ವಿಚಾರಕ್ಕೆ ಜಗಳ ತೆಗೆದಿದ್ದ.ಜಗಳ ವಿಕೋಪಕ್ಕೆ ತಿರುಗಿದಾಗ ಅರ್ಬಾಜ್ ಕುತ್ತಿಗೆಗೆ ಬ್ಲೇಡ್ ನಿಂಡ ಇರಿದಿದ್ದಾನೆ ವ್ಯಕ್ತಿ. ಸ್ಥಳಕ್ಕೆ ಕಸಬಾಪೇಟ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.ಗಾಯಾಳು ಇಬ್ಬರನ್ನು ಸಧ್ಯ ಕಿಮ್ಸ್ಗೆ ದಾಖಲು ಮಾಡಲಾಗಿದೆ.