ಬೆಂಗಳೂರು –
ಈಗಾಗಲೇ ರಾಜ್ಯದ ಸರ್ಕಾರಿ ನೌಕರರಿಗೆ ಹತ್ತು ಹಲವಾರು ಯೋಜನಗೆಳನ್ನು ವ್ಯವಸ್ಥಿತವಾಗಿ ಸರ್ಕಾರದಿಂದ ಒದಗಿಸುತ್ತಿರುವ ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಈಗ ಮತ್ತೊಂದು ಸೇವೆಯನ್ನು ಆನ್ ಲೈನ್ ಮಾಡುವ ಕುರಿತಂತೆ ಮಾಹಿತಿಯನ್ನು ನೀಡಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು ಕೆಜಿಐಡಿಯಡಿ ಸಾಮೂಹಿಕ ಪಿಂಚಣಿ ವ್ಯವಸ್ಥೆಯಡಿ ವೇತನ ಪರಿಷ್ಕರಣೆಗೆ ಪೂರಕವಾಗಿ ವಿಮೆ ಮೊತ್ತ ಕಡಿತ, ವರ್ಗಾವಣೆಗೊಂಡ ನೌಕರರ ವಿಮೆ ವಿವರ ದಾಖಲಾತಿ ಬಾಕಿ ವಿವರ, ಮುಂಗಡ ಬಡ್ಡಿ, ಲಾಭಾಂಶ ಮಾಹಿತಿ ಸಕಾಲದಲ್ಲಿ ಸಿಗದೆ ತೊಂದರೆ ಅನುಭವಿಸುವಂತಾಗಿತ್ತು.
ಜೊತೆಗೆ ಲೋಪ, ಅಕ್ರಮಗಳಿಗೂ ಅವಕಾಶವಾ ಗುತ್ತಿತ್ತು ಈಗ ಆನ್ಲೈನ್ನಲ್ಲೇ ಎಲ್ಲಾ ಮಾಹಿತಿ ಸಿಗುವ ವ್ಯವಸ್ಥೆ ಜಾರಿಯಾಗುತ್ತಿದೆ ಎಂದು ಷಡಾಕ್ಷರಿ ಅವರು ಹೇಳಿದರು.ಈಗಾಗಲೇ 42 ಲಕ್ಷ ವಿಮಾ ಪಾಲಿಸಿಗಳ ವಿವರ ಆನ್ಲೈನ್ನಲ್ಲಿ ಲಭ್ಯವಿದೆ. ಪ್ರಾಯೋಗಿಕ ಪರಿಶೀಲನೆಯೂ ಪೂರ್ಣಗೊಂಡಿದೆ ಎಂದರು.ಮುಂಗಡ, ಸಾಲ ಬಡ್ಡಿ, ಲಾಭಾಂಶ ಡಿವಿಡೆಂಡ್ ಇತರೆ ಸೇವೆ, ಮಾಹಿತಿ 24 ಗಂಟೆಯಲ್ಲಿಸಿಗಲಿದೆ ವೇತನ ವಿವರ, ಮೂಲ ವೇತನ, ಕಡಿತ ಮೊತ್ತ, ಇತರೆ ವಿವರ ಮೊಬೈಲ್ನಲ್ಲೇ ಸಿಗಲಿದೆ
ಸಂಘದ ನಿರಂತರ ಪ್ರಯತ್ನದ ಪರಿಣಾಮ ಆನ್ಲೈನ್ ವ್ಯವಸ್ಥೆ ಶೀಘ್ರವೇ ಲಭ್ಯವಾಗಲಿದೆ ಎಂದು ಷಡಾಕ್ಷರಿ ಅವರು ಹೇಳಿದರು. ಇದರೊಂ ದಿಗೆ ಬಹುಕಾಲದ ಸರ್ಕಾರಿ ನೌಕರರ ಸಮಸ್ಯೆ ಸಂಕಷ್ಟ ಎಲ್ಲವುಗಳು ನಿವಾರಣೆಯಾದಂತಾ ಗಲಿದ್ದು ಆನ್ ಲೈನ್ ನಲ್ಲಿ ಸೇವೆ ಸಮಗ್ರ ಸೇವೆ ಗಳು ಸಿಗಲಿವೆ ಎಂದರು.
ಸುದ್ದಿ ಸಂತೆ ನ್ಯೂಸ್…..