This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

ಧಾರವಾಡ

ಹುಬ್ಬಳ್ಳಿ ಬೆಂಗಳೂರು ಟ್ರೇನ್ ರದ್ದು ಆದೇಶ ಹಿಂಪಡೆಯಿರಿ ಕಾಂಗ್ರೇಸ್ ಪಕ್ಷಧಿಂದ ಮನವಿ – ನೈರುತ್ಯ ರೇಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಸುವರ್ಣ ಕಲ್ಲಕುಂಟಲಾ,ರಜತ್ ಉಳ್ಳಾಗಡ್ಡಿಮಠ,ಆರೀಪ್ ಭದ್ರಾಪೂರ ನೇತ್ರತ್ವದಲ್ಲಿ ಮನವಿ…..

WhatsApp Group Join Now
Telegram Group Join Now

ಹುಬ್ಬಳ್ಳಿ

ಹುಬ್ಬಳ್ಳಿ ಬೆಂಗಳೂರು ಟ್ರೇನ್ ರದ್ದು ಆದೇಶ ಹಿಂಪಡೆಯಿರಿ ಕಾಂಗ್ರೇಸ್ ಪಕ್ಷಧಿಂದ ಮನವಿ – ನೈರುತ್ಯ ರೇಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಸುವರ್ಣ ಕಲ್ಲಕುಂಟಲಾ,ರಜತ್ ಉಳ್ಳಾಗಡ್ಡಿ ಮಠ,ಆರೀಪ್ ಭದ್ರಾಪೂರ ನೇತ್ರತ್ವದಲ್ಲಿ ಮನವಿ

ಹುಬ್ಬಳ್ಳಿ ಬೆಂಗಳೂರು ವಿಶೇಷ ಟ್ರೇನ್ ನ್ನು ರದ್ದು ಮಾಡಲಾಗಿದೆ.ಯಾವುದೇ ಕಾರಣವನ್ನು ನೀಡದೆ ಏಕಾಎಕಿಯಾಗಿ ಈ ಒಂದು ಟ್ರೇನ್ ಗಳನ್ನು ರೇಲ್ವೆ ಇಲಾಖೆ ರದ್ದು ಮಾಡಿದ್ದು ಈ ಒಂದು ವಿಚಾರ ಕುರಿತಂತೆ ಹುಬ್ಬಳ್ಳಿಯಲ್ಲಿ ಕಾಂಗ್ರೇಸ್ ಪಕ್ಷದವರು ಸಿಡಿದೆದ್ದಿದ್ದಾರೆ.ಸಾರ್ವಜನಿಕರ ಇದರಿಂದಾಗಿ ತೊಂದರೆಯಾಗುತ್ತಿದ್ದು

ಈ ಒಂದು ಸಮಸ್ಯೆಯ ಕುರಿತಂತೆ ಕಾಂಗ್ರೇಸ್ ಪಕ್ಷದವರು ಧ್ವನಿ ಎತ್ತಿದ್ದಾರೆ.ಈ ಒಂದು ವಿಚಾರ ಕುರಿತಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಮತ್ತು ವಿದ್ಯಾನಗರ ಬ್ಲಾಕ್ ಕಾಂಗ್ರೇಸ್ ಪಕ್ಷದ ಸಮಿತಿ ಯಿಂದ ದ್ವನಿ ಎತ್ತಲಾಗಿದ್ದು ಸಾರ್ವಜನಿಕರ ಧ್ವನಿಯಾಗಿ ಈ ಒಂದು ವಿಚಾರ ಕುರಿತಂತೆ ಕೈ ಪಡೆ ನೈರುತ್ಯ ರೇಲ್ವೆಯ ಪ್ರಧಾನ ವ್ಯವಸ್ಥಾಪಕರಿಗೆ ಮನವಿಯನ್ನು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಪ್ರಧಾನ ವ್ಯವಸ್ಥಾಪಕರನ್ನು ಭೇಟಿ ಯಾದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಮತ್ತು ವಿದ್ಯಾನಗರ ಬ್ಲಾಕ್ ಕಾಂಗ್ರೇಸ್ ಪಕ್ಷದ ಸಮಿತಿಯ ಅಧ್ಯಕ್ಷರ ನೇತ್ರತ್ವದಲ್ಲಿನ ಟೀಮ್ ಮನವಿಯನ್ನು ನೀಡಿತು.ಈ ಒಂದು ಟ್ರೇನ್ ರದ್ದತಿಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು

ಹೀಗಾಗಿ ಇದರಿಂದಾಗಿ ಸಾರ್ವಜನಿಕರು ಕೂಡಾ ಇನ್ನಷ್ಟು ತೊಂದರೆಯನ್ನು ಅನುಭವಿಸುವ ಮುನ್ನ ಈ ಕೂಡಲೇ ರದ್ದಾಗಿರುವ ಈ ಎಲ್ಲಾ ಟ್ರೇನ್ ಗಳನ್ನು ಕೂಡಲೇ ಮತ್ತೆ ಕಾರ್ಯಾರಂಭ ಮಾಡ ಬೇಕೆಂದು ಒತ್ತಾಯಿಸಿ ಮನವಿಯನ್ನು ನೀಡಿದರು

ಈ ಒಂದು ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಸುವರ್ಣ ಕಲ್ಲಗುಂಟಲಾ,ವಿದ್ಯಾನಗರ ಬ್ಲಾಕ್ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ,ಪಾಲಿಕೆಯ ಸದಸ್ಯರಾದ ಆರೀಫ್ ಭದ್ರಾಪೂರ,ಶಿವು ರಾಯನಗೌಡರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..


Google News

 

 

WhatsApp Group Join Now
Telegram Group Join Now
Suddi Sante Desk