ಬೈಂದೂರು-
ಶಾಲೆಯಿಂದ ಮನೆಗೆ ಹೊರಟಿದ್ದ ಸಮಯದಲ್ಲಿ ವಿದ್ಯಾರ್ಥಿ ಯೊಬ್ಬಳು ಕಾಲು ಜಾರಿ ಬಿದ್ದು ಹೊಳೆ ಪಾಲಾದ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನ ಕಾಲ್ತೋಡು ಗ್ರಾಮದ ಬೀಜಮಕ್ಕಿ ಎಂಬಲ್ಲಿ ನಡೆದಿದೆ.ಶಾಲೆ ಬಿಟ್ಟ ನಂತರ ಮನೆಗೆ ತೆರಳುತ್ತಿದ್ದ ವೇಳೆಯಲ್ಲಿ ಕಾಲು ಸಂಕದಿಂದ ಜಾರಿ ಬಿದ್ದು ಎರಡನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ ಹೊಳೆಯಲ್ಲಿ ಹೋಗಿದ್ದಾಳೆ
ಕಾಲ್ತೋಡಿನ ಬೊಳಂಬಳ್ಳಿಯ ಮಕ್ಕಿಮನೆ ಮನೆ ನಿವಾಸಿ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ಅವರ ಪುತ್ರಿ ಸನ್ನಿಧಿ (7)ನೀರು ಪಾಲಾದ ಬಾಲಕಿಯಾಗಿದ್ದಾಳೆ.ಶಾಲೆ ಬಿಟ್ಟ ಬಳಿಕ ಮನೆಗೆ ಬರುತ್ತಿದ್ದ ವೇಳೆಯಲ್ಲಿ ಬೀಜಮಕ್ಕಿ ಎಂಬಲ್ಲಿ ಹರಿಯುವ ಹೊಳೆಗೆ ಹಾಕಲಾಗಿದ್ದ ಕಾಲು ಸಂಕದಲ್ಲಿ ಬಾಲಕಿ ಸನ್ನಿಧಿ ಮತ್ತು ಆಕೆಯ ಸ್ನೇಹಿತರು ಹೊಳೆದಾಟು ತ್ತಿದ್ದ ಸಂದರ್ಭದಲ್ಲಿ ಸನ್ನಿಧಿ ಕಾಲು ಜಾರಿ ಹೊಳೆಗೆ ಬಿದ್ದಿದ್ದು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾಳೆ.
ವಿಷಯ ತಿಳಿದು ತಕ್ಷಣ ಹುಡುಕಾಟ ಮಾಡಿದರೂ ಸನ್ನಿಧಿ ಪತ್ತೆಯಾಗಿಲ್ಲ.ಬೈಂದೂರು ಪೊಲೀಸರು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹುಡುಕಾಟ ಮಾಡಿದ್ದಾರೆ. ಬಾಲಕಿ ಮನೆಗೆ ಭೇಟಿ ಕೊಟ್ಟು ಶಾಸಕ ಸುಕುಮಾರ್ ಶೆಟ್ಟಿ ಸಾಂತ್ವಾನ ಹೇಳಿದ್ದು ಬೀಜಮಕ್ಕಿ ಪ್ರದೇಶದ ಈ ಹೊಳೆಗೆ ಸೇತುವೆ ಆಗಬೇಕೆಂದು ಜನ ಸುಮಾರು ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜ ನವಾಗಿಲ್ಲ.ಹೊಳೆಯ ಇನ್ನೊಂದು ಭಾಗದಲ್ಲಿ ನೂರಕ್ಕೂ ಅಧಿಕ ಕುಟುಂಬಗಳು ವಾಸವಿದ್ದು ಮಳೆಗಾಲದಲ್ಲಿ ನೀರಿನ ಹರಿವು ಜಾಸ್ತಿ ಆದರೆ ಬೀಜಮಕ್ಕಿ ಪ್ರದೇಶ ದ್ವೀಪವಾಗು ತ್ತದೆ.ಶಾಶ್ವತ ಸೇತುವೆ ನಿರ್ಮಾಣಕ್ಕೆ ಜನರು ಮನವಿಗಳ ಮೇಲೆ ಮನವಿ ನೀಡಿದರೂ ಯಾವುದೇ ಪ್ರಯೋಜನ ವಾಗದ ಹಿನ್ನಲೆಯಲ್ಲಿ ಜನರೇ ತಾತ್ಕಾಲಿಕ ವಾಗಿ ಕಾಲು ಸಂಕ ನಿರ್ಮಾಣ ಮಾಡಿದ್ದರು.