This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ರುಂಡ ಮುಂಡ ಆರೋಪಿಗಳ ಬಂಧನ – ಆ ಕೊಲೆಯ ಹಿಂದೆ ಇದೆ ದೊಡ್ಡ ಕಹಾನಿ…..ಹುಬ್ಬಳ್ಳಿಯ ಗ್ರಾಮೀಣ ಪೊಲೀಸರ ಕಾರ್ಯಾ ಚರಣೆ……

WhatsApp Group Join Now
Telegram Group Join Now

ಧಾರವಾಡ –

ಏಪ್ರಿಲ್ 10 ರಂದು ಹುಬ್ಬಳ್ಳಿಯ ಹೊರವಲಯದ ಕಲಘಟಗಿಯ ದೇವರ ಗುಡಿಹಾಳ ಗುಡ್ಡದ ಪ್ರದೇಶ ದಲ್ಲಿ ಪತ್ತೆಯಾದ ದೇಹವಿಲ್ಲದ ರುಂಡ ದ ಪ್ರಕರಣ ವನ್ನು ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಪತ್ತೆ ಹಚ್ಚಿದ್ದಾರೆ

ಹೌದು ಯಾವುದೇ ರೀತಿಯ ದೇಹವಿಲ್ಲದೇ ಕೇವಲ ರುಂಡ ಅಷ್ಟೇ ಪತ್ತೆಯಾಗಿತ್ತು ಈ ಒಂದು ಪ್ರಕರಣ ಕುರಿತು ದೂರನ್ನು ದಾಖಲು ಮಾಡಿಕೊಂಡ ಹುಬ್ಬಳ್ಳಿ ಯ ಗ್ರಾಮೀಣ ಪೊಲೀಸರು ಈ ಒಂದು ಪ್ರಕರಣವನ್ನು ಬೇಧಿಸಿದ್ದಾರೆ.

ದೂರನ್ನು ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಮೇಶ್‌ ಗೋಕಾಕ್ ಮತ್ತು ಟೀಮ್ ಎರಡು ಮೂರು ದಿನಗಳಲ್ಲಿ ಬಿಡುವಿಲ್ಲದೆ ಕಾರ್ಯಾಚರಣೆ ಮಾಡಿ ಪ್ರಕರಣಕ್ಕೆ ಸುಖಾಂತ್ಯ ಹಾಡಿದ್ದಾರೆ.

ಅನಾಮಧೇಯ ವ್ಯಕ್ತಿಯ ಶವ ಪತ್ತೆ ಕುರಿತು ಅದು ಕೇವಲ ರುಂಡ ಅಷ್ಟೇ ಪತ್ತೆಯಾದ ವಿಚಾರ ಕುರಿತು ತನಿಖೆಗೆ ಇಳಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ ರು ನಾಲ್ಕು ಜನ ಆರೋಪಿ ಗಳನ್ನು ಬಂಧನ ಮಾಡಿದ್ದಾರೆ

ಧಾರವಾಡದ ಎಸ್ಪಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಆರಂಭ ಮಾಡಿದ ಹುಬ್ಬಳ್ಳಿಯ ಗ್ರಾಮೀಣ ಇನ್ಸ್ಪೆಕ್ಟರ್ ರಮೇಶ್‌ ಗೋಕಾಕ್ ಅವರು ಎರಡೇ ಎರಡು ದಿನಗಳಲ್ಲಿ ಪ್ರಕರಣವನ್ನು ಭೇಧಿಸಿದ್ದಾರೆ

ಇನ್ನೂ ರುಂಡ ಅಷ್ಟೇ ಪತ್ತೆಯಾದ ವ್ಯಕ್ತಿಯ ಹೆಸರು ರಾಕೇಶ್ ಕಾಟವೇ ಗುಜರಾತ್ ಹುಬ್ಬಳ್ಳಿಯಲ್ಲಿ ವಾಸಿಸುತ್ತಿದ್ದನು. ಇವನಿಗೆ ತಂಗಿ ಯೊಬ್ಬಳು ಇದ್ದಳು ಇವಳನ್ನು ಹುಬ್ಬಳ್ಳಿಯ ನಿಯಾಜ್ ಕಾಟೀಗಾರ್ ಲವ್ ಮಾಡುತ್ತಿದ್ದನು ಇವರಿಬ್ಬರ ಲವ್ ಗೆ ರಾಕೇಶ್ ಸಮಸ್ಯೆ ಯಾಗಿದ್ದನು ಹೀಗಾಗಿ ಇವನನ್ನೆ ಮುಗಿಸಿ ದರೆ ಲವ್ ಸರಳವಾಗುತ್ತದೆ ಎಂದುಕೊಂಡು ಸ್ಕೆಚ್ ಹಾಕಿ ರಾಕೇಶ್ ನನ್ನು ಕೊಲೆ ಮಾಡಲಾಗಿದೆ

ಇನ್ನೂ ಈ ಒಂದು ಕಾರ್ಯಾಚರಣೆ ಯನ್ನು ಹುಬ್ಬಳ್ಳಿಯ ಗ್ರಾಮೀಣ ಇನ್ಸ್ಪೆಕ್ಟರ್ ರಮೇಶ್‌ ಗೋಕಾಕ್ ನೇತ್ರತ್ವದಲ್ಲಿ ನಡೆದ ಕಾರ್ಯಾಚರಣೆ ಗೆ ಇನ್ಸ್ಪೆಕ್ಟರ್ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಾದ ಪ್ರಭು ಸೂರಿನ್, ಬಸವರಾಜ ಹೂಗಾರ, ಕಿರಣ ಮೋಹಿತೆ, ಮಹೇಂದ್ರ ನಾಯಕ ಆರ್ ಎಮ್ ಭದ್ರಾಪೂರ,ಪೊಲೀಸ್ ಸಿಬ್ಬಂದಿ ಗಳಾದ ನಾರಾಯಣ ಹಿರೇಹೊಳಿ,ಡೇವಿಡ್, ಹೆಚ್ ಬಿ ಐಹೋಳಿ,ಮಹಾಂತೇಶ, ನಾನೇಗೌಡ,ಅರ್ಜುನ ಠಕಾಯಿ ಮಂಜು ವಾಲಿಕಾರ ಚಂದ್ರು ಜನಗನ್ನವರ. ಸೇರಿದಂತೆ ಹಲವರು ಪಾಲ್ಗೊಂಡಿದ್ದರು


Google News

 

 

WhatsApp Group Join Now
Telegram Group Join Now
Suddi Sante Desk