ಹೈದರಾಬಾದ್ –
ಇಂದಿನ ದಿನಗಳಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಅದರಲ್ಲೂ ಸರ್ಕಾರಿ ಕೆಲಸದಲ್ಲಿರುವವರೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದಿಲ್ಲ.ಇದಕ್ಕೆ ಜನಪ್ರತಿನಿಧಿಗಳು ಕೂಡ ಇದಕ್ಕೆ ಹೊರತಾಗಿಲ್ಲ.ಹಣ ಖರ್ಚಾದರೂ ಪರವಾಗಿಲ್ಲ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದು ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲಾ-ಕಾಲೇಜಿಗೆ ಸೇರಿಸುತ್ತಾರೆ. ಶಿಕ್ಷಣದ ಅಡಿಪಾಯ ಚೆನ್ನಾಗಿರಬೇಕೆಂಬ ಉದ್ದೇಶದಿಂದ ಮಕ್ಕಳನ್ನು ಆರಂಭದಲ್ಲೇ ಎಲ್ಕೆಜಿ-ಯುಕೆಜಿಗೆ ದಾಖಲು ಮಾಡುತ್ತಾರೆ ಇನ್ನೂ ಸರ್ಕಾರಿ ಶಾಲೆ-ಕಾಲೇಜುಗಳು ಬಡ ಮಕ್ಕಳಿಗೆ ಮಾತ್ರ ಎನ್ನುವ ಪರಿಸ್ಥಿತಿ ನಿರ್ಮಣವಾಗಿದ್ದು ಇದರ ನಡುವೆ ಇಲ್ಲೊಬ್ಬ ಜಿಲ್ಲಾಧಿಕಾರಿ ತಮ್ಮ ಇಬ್ಬರು ಮಕ್ಕಳನ್ನು ಅಂಗನವಾಡಿಗೆ ಸೇರಿಸುವ ಮೂಲಕ ಇತರರಿಗೆ ಮಾದರಿ ಆಗಿದ್ದಾರೆ.
ಹೌದು ತೆಲಂಗಾಣದ ಕುಮಾರಭೀಮ ಆಸಿಫಬಾದ್ ಜಿಲ್ಲಾಧಿಕಾರಿ ರಾಹುಲ್ ರಾಜ್ ಅವರಿಗೆ ನಿರ್ವಿಕಾರಾಜ್ ಹಾಗೂ ರಿತ್ವಿಕಾರಾಜ್ ಎಂಬ ಇಬ್ಬರು ಮಕ್ಕಳಿದ್ದು, ಇಬ್ಬರ ನ್ನು ಅಂಗನವಾಡಿಗೆ ಸೇರಿಸುವ ಮೂಲಕ ಸರಳತೆ ಮೆರೆದಿ ದ್ದಾರೆ.ಜನಕಪುರ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ದಾಖಲಿಸಿದ್ದು ಇಬ್ಬರು ಮಕ್ಕಳು ಕೂಡ ಇನ್ನಿತರ ಮಕ್ಕಳ ಜತೆ ಸಂತೋಷವಾಗಿ ಆಟವಾಡುತ್ತಾ ಸಧ್ಯ ಕಲಿಕೆಯಲ್ಲಿ ತೊಡಗಿಕೊಂಡಿದ್ದಾರೆ.ರೀತಿಯ ಎಲ್ಲ ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಅಂಗನವಾಡಿ ಮತ್ತು ಶಾಲೆಗೆ ಸೇರಿಸಿದರೆ, ಅಭಿವೃದ್ಧಿಯಾಗುತ್ತವೆ ಎಂದು ಅಭಿಪ್ರಾಯ ಈಗ ಎಲ್ಲೆಡೆ ಕೇಳಿ ಬರುತ್ತಿದೆ