ಧಾರವಾಡ –
ಸಾಮಾನ್ಯವಾಗಿ ಶಾಲೆ ಅಂದಾಕ್ಷಣ ಪಾಠ ಮಾಡೊದು ಆ ಕೆಲಸ ಈ ಕೆಲಸ ಎನ್ನುತ್ತಾ ಶಿಕ್ಷಕರು ತುಂಬಾ ಬ್ಯೂಜಿ ಆಗಿರುತ್ತಾರೆ ಇದೇಲ್ಲದರ ನಡುವೆ ಇಲ್ಲೊಬ್ಬ ಸರ್ಕಾರಿ ಶಾಲೆ ಯ ಮುಖ್ಯಶಿಕ್ಷಕಿ ಮಾನವಿಯತೆಯ ಕೆಲಸ ಮಾಡಿದ್ದಾರೆ
ಹೌದು ಮಾನವೀಯತೆ ಮೆರೆದ ಶಾಲಾ ಮುಖ್ಯೋಪಾಧ್ಯಾ ಯನಿ ಜಾನಕಿ ಉಪಾಧ್ಯಾಯ ಅವರು.ಅಲ್ಲಾಪೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂದಿನಂತೆ ಮಧ್ಯಾಹ್ನ ಶಾಲೆಯ ಎಲ್ಲಾ ಮಕ್ಕಳನ್ನು ಊಟ ಮಾಡುತ್ತಾ ಕುಳಿತ್ತಿದ್ದರು ಅದರಲ್ಲಿ ಒಂದು ಮಗು ಊಟ ಮಾಡದೇ ಹಾಗೇ ಅಳುತ್ತಾ ಕುಳಿತಿತ್ತು ಆ ಮಗುವನ್ನು ಗಮನಿಸಿ ಯಾಕೆ ಊಟವನ್ನು ಮಾಡದೆ ಹಾಗೆಯೇ ಸುಮ್ಮನೆ ಕುಳಿತು ಅಳುತ್ತಿರುವೆ ಏನು ಆಯಿತು ಎಂದು ವಿಚಾರಿಸಿ ಕೇಳಿದಾಗ ಆ ಮಗುವಿನ ಕೈ ನೋವು ಆಗಿದೆ ಉಟ ಮಾಡಲು ಬರುವುದು ಇಲ್ಲಾ ಗಾಯ ಆಗಿರುವುದ ರಿಂದ ಎಂದಿತು ಆಗ ಶಾಲಾ ಮುಖ್ಯೋಪಾಧ್ಯಾಯಿನಿ ಜಾನಕಿ ಉಪಾಧ್ಯಾಯ ಅವರು ತಾವು ಊಟ ಮಾಡು ವುದು ಅದನ್ನು ಬಿಟ್ಟು ಆ ಮಗುವಿಗೆ ಧೈರ್ಯವನ್ನು ಹೇಳಿ ತಮ್ಮ ಕೈಯಾರೆ ತಾವೇ ಮಗುವಿಗೆ ಊಟವನ್ನು ಮಾಡಿಸಿ ಮಾನವಿಯತೆ ಮೆರೆದಿದ್ದಾರೆ
ಇನ್ನೂ ಈ ಒಂದು ಕಾರ್ಯ ಮಾಡಿದ ಜಾನಕಿ ಟೀಚರ್ ಗೆ ಗ್ರಾಮಸ್ಥರ ಪರವಾಗಿ ಗ್ರಾಮ ಪಂಚಾಯತಿ ಸದಸ್ಯರಾಗಿರು ಮಲ್ಲಿಕಾರ್ಜುನ ರಡ್ಡೇರ ಧನ್ಯವಾದಗಳನ್ನು ಹೇಳಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ