ಯಾದಗಿರಿ –
SSLC ಯಲ್ಲಿ ಉತ್ತಮ ಸಾಧನೆ ಮಾಡಿದ ರಾಜ್ಯ ಸರ್ಕಾರಿ ನೌಕರರ ಮಕ್ಕಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನೌಕರರ ಪದಗ್ರಹಣ ಕಾರ್ಯಕ್ರಮ ಯಾದಗಿರಿಯ ಗುರುಮಿಠಕಲ್ ನಲ್ಲಿ ನಡೆಯಿತು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಸೇರಿದಂತೆ ರಾಜ್ಯ ಸಂಘಟನೆಯ ನಾಯಕರು ಸೇರಿದಂತೆ ಹಲವು ಗಣ್ಯರು ಹಾಗೇ ರಾಯಚೂರು ಯಾದಗಿರಿ ಸೇರಿ ದಂತೆ ಬೇರೆ ಬೇರೆ ಜಿಲ್ಲೆ ಮತ್ತು ತಾಲ್ಲೂಕುಗಳಿಂದ ಶಿಕ್ಷಕರು ಸಂಘಟನೆಯ ನಾಯಕರು ಪಾಲ್ಗೊಂಡಿದ್ದರು.
ಇನ್ನೂ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಷಡಾಕ್ಷರಿ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು ಇದು ಸರ್ವೆ ಸಾಮಾನ್ಯವಾಗಿ ಕಂಡು ಬಂದ ಚಿತ್ರಣವಾದರೆ ಇನ್ನೂ ಪ್ರಮುಖವಾಗಿ ಈ ಒಂದು ಕಾರ್ಯಕ್ರಮದಲ್ಲಿ ಕಂಡು ಬಂದಿದ್ದು ಎಲ್ಲರ ತಲೆ ಮೇಲೆ ಗಾಂಧೀ ತಾತನ ಟೋಪಿ ಈ ಒಂದು ಟೋಪಿ ಯನ್ನು ಸುಮ್ಮನೆ ಹಾಕಿಕೊಳ್ಳದೇ ಅದರ ಮೇಲೆ OTS ಎಂದು ಬರೆಯಲಾಗಿತ್ತು
ಹೌದು ಸಧ್ಯ ರಾಜ್ಯದಲ್ಲಿ ಯಾರಿಗೂ ಯಾವ ಇಲಾಖೆಗೂ ಇಲ್ಲದೇ ದೊಡ್ಡದಾಗಿ ಸಮಸ್ಯೆಯಾಗಿದ್ದು ಶಿಕ್ಷಕರ ವರ್ಗಾ ವಣೆ ಈ ಒಂದು ವರ್ಗಾವಣೆಯಲ್ಲಿ ಸಿಲುಕಿಕೊಂಡು ನಾಡಿನ ಸಾವಿರಾರು ಶಿಕ್ಷಕರು ಪರದಾಡುತ್ತಿದ್ದು ಹೀಗಾಗಿ ವೃತ್ತಿಯಲ್ಲಿ ಒಮ್ಮೆಯಾದರು OTS ಕೊಡಿ ಎಂದು ಕೇಳತಾ ಇದ್ದಾರೆ ಆದರೂ ಯಾರು ಕೇಳುತ್ತಿಲ್ಲ ಸ್ಪಂದಿಸುತ್ತಿಲ್ಲ ಹೀಗಾಗಿ ಇವತ್ತಿನ ಈ ಒಂದು ಕಾರ್ಯಕ್ರಮದಲ್ಲಿ ಷಡಾಕ್ಷರಿ ಅವರು ಸೇರಿದಂತೆ ಪ್ರತಿಯೊಬ್ಬರು ತಲೆಯ ಮೇಲೊಂದು ಟೋಪಿ ಹಾಕಿಕೊಂಡು OTS ಎಂದು ಬರೆದುಕೊಂಡು ಈ ಕುರಿತಂತೆ ಒತ್ತಾಯವನ್ನು ಮಾಡಿದರು
ವೇದಿಕೆಯಲ್ಲೂ ಕುಳಿತಲ್ಲೂ ನಿಂತಲ್ಲೂ ಹೀಗೆ ಕಾರ್ಯಕ್ರಮ ದಲ್ಲಿ OTS ಕುರಿತಂತೆ ಜೋರಾಗಿ ಕೂಗು ಕೇಳಿ ಬಂದಿತು ಇನ್ನೂ ಇತ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಷಡಾಕ್ಷರಿ ಅವರು ಕೂಡಾ ಈ ಒಂದು ವಿಚಾರ ಕುರಿತಂತೆ ಗಂಭೀರ ವಾಗಿ ಪರಿಗಣಿಸಿ ಶೀಘ್ರದಲ್ಲೇ ಪರಿಹಾರದ ಮಾತನ್ನು ಹೇಳಿದ್ದಾರೆ