ಬೆಂಗಳೂರು –
ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ಹಬ್ಬದ ಮುಂಗಡ ಹಣವನ್ನು ಹೆಚ್ಚು ಮಾಡಿ ಆದೇಶವನ್ನು ಮಾಡಲಾಗಿದೆ ಹೌದು ಈ ಒಂದು ವಿಚಾರ ಕುರಿತು ರಾಜ್ಯದ ಸರ್ಕಾರಿ ನೌಕರರ ಪರವಾಗಿ ಹೆಚ್ಚಳ ಮಾಡುವಂತೆ ಸಂಘವು ಮನವಿಯನ್ನು ಮಾಡಿತ್ತು ಸಂಘದ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರವು ಮನವಿ ಮೇರೆಗೆ ರಾಜ್ಯ ಸರಕಾರಿ ನೌಕರರಿಗೆ ಹಬ್ಬದ ಮುಂಗಡ ಹಣವನ್ನು 10000=00 ರೂಗಳಿಂದ 25,000=00 ರೂಪಾಯಿಗಳಿಗೆ ಹೆಚ್ಚಿಸಿ ಆದೇಶವನ್ನು ಮಾಡಿದೆ.
ಇನ್ನೂ ಈ ಒಂದು ಆದೇಶದ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿಗೆ ರಾಜ್ಯದ ಸಮಸ್ತ ನೌಕರರು ಹಾಗೇ ಚಾಣಾಕ್ಷ ನಡೆಯಿಂದ ಹಿಡಿದ ಕಾರ್ಯ ಬಿಡದೆ ಸರ್ಕಾರಿ ಆದೇಶ ಮಾಡಿಸುತ್ತಿರುವ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ರವರಿಗೆ ಸಮಸ್ತ ನೌಕರರು ತುಂಬು ಹೃದಯದ ಧನ್ಯವಾದಗಳನ್ನು ಹೇಳಿದ್ದಾರೆ