ಧಾರವಾಡ –
ಸಾಮಾನ್ಯವಾಗಿ ಸರ್ಕಾರಿ ಶಾಲೆ ಹಾಗೇ ಇಲ್ಲಿನ ಶಿಕ್ಷಕರು ಹಾಗೇ ಹೀಗೆ ಅನ್ನುವರರೇ ಹೆಚ್ಚು. ಬದಲಾದ ವ್ಯವಸ್ಥೆಯ ನಡುವೆ ಶಿಕ್ಷಕರು ಕೂಡಾ ಇಂದು ನಾವು ಯಾವುದರಲ್ಲೂ ಕಡಿಮೆ ಇಲ್ಲ ಎನ್ನುತ್ತಾ ಹೈಟೇಕ್ ಆಗಿದ್ದಾರೆ.ಇದಕ್ಕೆ ಮೇಲಿಂದ ಮೇಲೆ ಸರ್ಕಾರಿ ಶಾಲೆಯಲ್ಲಿನ ಪ್ರತಿಭೆಗಳೇ ಮಿಂಚು ತ್ತಿರುವುದು ಸಾಕ್ಷಿಯಾಗಿ ನಮ್ಮ ಮುಂದೆ ಕಂಡು ಬರುತ್ತವೆ.
ಇನ್ನೂ ಇತ್ತೀಚಿಗಂತೂ ನಮ್ಮ ಸರ್ಕಾರಿ ಶಾಲೆಗಳು ಅದರಲ್ಲೂ ಶಿಕ್ಷಕರು ಇಂದು ಎಲ್ಲಾ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಬೆಳೆಯುತ್ತಿದ್ದಾರೆ.ಹೀಗಾಗಿ ಸಧ್ಯ ರಾಜ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಎಲ್ಲಿಲ್ಲದೇ ಬೇಡಿಕೆ ಬರುತ್ತಿದ್ದು ಇದರ ನಡುವೆ ಗ್ರಾಮೀಣ ಪ್ರದೇಶದ ಶಿಕ್ಷಕರೊಬ್ಬರು ಶಿಕ್ಷಕ ದಿನಾಚರಣೆ ದಿನದಂದು ಆಂಗ್ಲ ಭಾಷೆಯಲ್ಲಿ ಮಾಡಿದ ಭಾಷಣ ವೈರಲ್ ಆಗಿದೆ.
ಹೌದು ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂ ಕಿನ ಶಿಕ್ಷಕರಾಗಿರುವ ಎಸ್ ಸಿ ಹೊಳೆಯಣ್ಣನವರ ಅವರ ಭಾಷಣ ವೈರಲ್ ಆಗಿದೆ.ಪಕ್ಕಾ ಹಳ್ಳಿ ಸೋಗ ಡಿನ ನೆಹರು ಶರ್ಟ್ ತಲೆಯ ಮೇಲೊಂದು ಗಾಂಧಿ ಟೋಪಿ ಧೋತಿ ಹಾಕಿಕೊಂಡು ನವಲಗುಂದ ತಾಲೂಕಿನ ಕುಮಾರಗೊಪ್ಪ ಸರ್ಕಾರಿ ಶಾಲೆಗೆ ಲೂಸಿ ಸಾಲ್ಡಾನರವರ ದತ್ತಿನಿಧಿ ಸ್ಥಾಪನೆ ಕಾರ್ಯಕ್ರಮ ದಲ್ಲಿ ಇವರು ಮಾಡಿರುವ ಭಾಷಣ ಅದರಲ್ಲೂ ಆಂಗ್ಲ ಭಾಷೆಯಲ್ಲಿನ ಮಾತುಗಳು ವೈರಲ್ ಆಗಿದ್ದು ಶಿಕ್ಷಕರಿಗೆ ಪ್ರೇರಣೆಯಾಗಿದೆ.
ಇದನ್ನು ನೋಡುತ್ತಿದ್ದರೆ ಗ್ರಾಮೀಣ ಪ್ರದೇಶದ ಶಿಕ್ಷಕರು ಯಾವುದರಲ್ಲೂ ಕಮ್ಮಿ ಇಲ್ಲ ಎಂಬೊದನ್ನು ತೋರಿಸಿಕೊಡುತ್ತದೆ.ಇದೇ ನಮ್ಮ ಶಿಕ್ಷಕರಿಗೆ ಹಿಡಿದ ಕೈಗನ್ನಡಿಯಾಗಿದೆ.