ಮೇಲಾಧಿಕಾರಿ ಕಿರುಕುಳಕ್ಕೇ ಬೇಸತ್ತು ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಸರ್ಕಾರಿ ನೌಕರ – ಆ್ಯಸಿಡ್ ಕುಡಿದ ವಾಸಿಂ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ…..

Suddi Sante Desk
ಮೇಲಾಧಿಕಾರಿ ಕಿರುಕುಳಕ್ಕೇ ಬೇಸತ್ತು ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಸರ್ಕಾರಿ ನೌಕರ – ಆ್ಯಸಿಡ್ ಕುಡಿದ ವಾಸಿಂ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ…..

ರಾಯಚೂರು

ಆ್ಯಸಿಡ್ ಕುಡಿದು ಎಸಿ ಕಚೇರಿ ಯ ಸಿಬ್ಬಂದಿ ಯೊಬ್ಬರು ಆತ್ಮಹತ್ಯೆ ಗೆ ಯತ್ನಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ.ಹೌದು ನಗರದ ಎಸಿ ಕಛೇರಿ ಸಿಬ್ಬಂದಿ ಆ್ಯಸಿಡ್ ಕುಡಿದಿದ್ದು ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ

ಮೇಲಧಿಕಾರಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿರೋ ಬಗ್ಗೆ ಶಂಕೆಯನ್ನು ವ್ಯಕ್ತವಾಗಿದೆ ವಾಸಿಂ ಚೌದರಿ (42) ಆತ್ಮಹತ್ಯೆಗೆ ಯತ್ನಿಸಿದ ಎಸಿ ಕಚೇರಿಯ ಸಿಬ್ಬಂದಿಯಾಗಿದ್ದಾರೆ.

ಲ್ಯಾಂಡ್ ರೆಕಾರ್ಡ್ ಕಿಪರ್ ಹುದ್ದೆಯಲ್ಲಿ ಡಿ ದರ್ಜೆ ಸಿಬ್ಬಂದಿಯಾಗಿದ್ದ ವಾಸಿಂ.ನಗರದಲ್ಲಿರೋ ಈಜು ಕೊಳದ ಬಳಿ ತೆರಳಿ ಆ್ಯಸಿಡ್ ಕುಡಿದು ಕೃತ್ಯವನ್ನು ಮಾಡಿಕೊಂಡಿದ್ದಾನೆ.

ಕೂಲೆಂಟ್ ವಾಟರ್ ಬಾಟಲ್ ನಲ್ಲಿ ಆ್ಯಸಿಡ್ ಬೇರಸಿ ಸೇವಿಸಿದ್ದ ವಾಸಿಂ.ಕಚೇರಿಯ ಪೈಲ್ ವಿಚಾರಕ್ಕೆ ಸಿಬ್ಬಂದಿ ಮನನೊಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.ಮೇಲಧಿಕಾರಿ ಕಲಬುರ್ಗಿ ಗೆ ತೆರಳಿದ್ದ ವೇಳೆಯೇ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ.

ಸಾವು ಬದುಕಿನ ಮಧ್ಯೆ ಹೋರಾಟ ಮಾಡ್ತಿರೋ ಸಿಬ್ಬಂದಿ.ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.ಘಟನೆಯಿಂದಾಗಿ ಪೊಲೀಸ್ ಠಾಣೆಗೆ ಕುಟುಂಬಸ್ಥರು ದೂರು ನೀಡಿ ದ್ದಾರೆ.ರಾಯಚೂರು ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದು ತನಿಖೆಗೆ ಆಗ್ರಹಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.