ಧಾರವಾಡ –
ಶಿಕ್ಷಕರ ಜ್ವಲಂತ ಸಮಸ್ಯೆಗಳ ಕುರಿತಂತೆ ನವಂಬರ್ 7 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಕರೆದಿರುವ ಈ ಒಂದು ಸಭೆಗೆ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ ಬೆಂಬಲವನ್ನು ಘೋಷಣೆ ಮಾಡಿದೆ.
ಹೌದು ಈ ಕುರಿತಂತೆ ಸಂಘದ ಎಲ್ಲಾ ಪದಾಧಿಕಾರಿಗಳು ಸಭೆಯನ್ನು ಮಾಡಿ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ.ಶಿಕ್ಷಕರ ಜ್ವಲಂತ ಸಮಸ್ಯೆಗಳ ಪರಿಹಾರದ ಈ ಒಂದು ನಿರ್ಣಾಯಕವಾದ ಸಭೆಯಲ್ಲಿ ಪರಿಷತ್ತಿನ ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸುತ್ತಿದ್ದು ಇದಕ್ಕೆ ನಮ್ಮ ಸಂಪೂರ್ಣವಾಗದ ಬೆಂಬಲವಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಗುರು ತಿಗಡಿ ಹೇಳಿದ್ದಾರೆ
ಇನ್ನೂ ಇವರೊಂದಿಗೆ ಕಾರ್ಯಾಧ್ಯಕ್ಷರಾಗಿರುವ ಎಸ್ ವೈ ಸೊರಟಿ,ಕೋಶಾಧ್ಯಕ್ಷರಾಗಿರುವ ಶಂಕರ ಘಟ್ಟಿ ಸೇರಿದಂತೆ ಸರ್ವ ಸದಸ್ಯರು ಸಂದೇಶ ಕಳಿಸಿದ್ದಾರೆ.