ಧಾರವಾಡ –
ಧಾರವಾಡ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗಣೇಶೋತ್ಸವ ವಿಸರ್ಜನೆಯ ಮೆರವಣಿಗೆ ಸಮಯದಲ್ಲಿ ಪೊಲೀಸರಿಂದ ಲಾಠಿ ಚಾರ್ಜ್ ಆರೋಪ ಕೇಳಿ ಬಂದಿದೆ.ಗ್ರಾಮೀಣ ಪ್ರದೇಶದ ಹಲವೆಡೆ ಡಿಜೆ ಹಚ್ಚಿದ್ದಾರೆಂದು ಪೊಲೀಸರು ಕಿರಿಕಿರಿ ಮಾಡಿ ಲಾಠಿ ಚಾರ್ಜ್ ಮಾಡಿದ್ದಾರೆ.ಹೀಗಾಗಿ ಗಣೇಶೋತ್ಸವ ಮೆರವಣಿಗೆ ಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೋಗಿದ್ದಾರೆ.ಗರಗ ಸೇರಿದಂತೆ ಹಲವೆಡೆ ಕಂಡು ಬಂದಿದೆ.
ಇನ್ನೂ ಇತ್ತ ಧಾರವಾಡದ ಹೊಸ ಯಲ್ಲಾಪುರ ಬಡಾವಣೆ ಯಲ್ಲಿ ಕೂಡಾ ಇಂಥಹ ಚಿತ್ರಣ ಕಂಡು ಬಂದಿದೆ.ಹೌದು ಇಲ್ಲೂ ಕೂಡಾ ಶಾಂತಿಯುತ ವಾಗಿ ಹೊರಟಿದ್ದ ಮೆರವಣಿಗೆ ಮಾಡುತ್ತಿದ್ದವರಿಗೆ ಪೊಲೀಸರು ದಬಾಯಿಸಿ ಲಾಠಿ ಚಾರ್ಜ್ ಮಾಡಿದ್ದಾ ರಂತೆ.
ಇದನ್ನು ಪ್ರಶ್ನೆ ಮಾಡಲು ಬಂದ ವಾರ್ಡ್ 8 ರ ಬಿಜೆಪಿ ಕಾರ್ಪೊರೇಟರ್ ಶಂಕರ ಶೇಳಕೆ ಮೇಲೆ ಕೂಡಾ ಲಾಠಿ ಚಾರ್ಜ್ ಮಾಡಿದ್ದಾರೆ.ಹೀಗಾಗಿ ಇದರಿಂದಾಗಿ ಅಸಮಾಧಾನಗೊಂಡ ಗಜಾನನ ಮಹಾ ಮಂಡಳಿ ಯವರು ತಡರಾತ್ರಿ ವರೆಗೂ ಪ್ರತಿಭಟನೆ ಮಾಡಿ ದರು.ಸಾಲ ದಂತೆ ಪೊಲೀಸರ ದೌರ್ಜನ್ಯ ವನ್ನು ಖಂಡಿಸಿದರು.
ಇನ್ನೂ ಧಾರವಾಡ ದಲ್ಲಿ ಇಷ್ಟೆಲ್ಲಾ ಆಗುತ್ತಿದ್ದರು ಕೂಡಾ ಇದನ್ನು ಪ್ರಶ್ನೆ ಮಾಡಲು ಕೇಳಲು ಯಾರೊಬ್ಬರೂ ಬಿಜೆಪಿ ನಾಯಕರಿಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ನಗರ ಪ್ರದೇಶದ ದಲ್ಲಿ ಏನಾಗುತ್ತಿದೆ ಎಂಬ ಕುರಿತು ಮಾತನಾಡದೇ ಮೌನವಾಗಿರೊದು ದುರಂತವೇ ಸರಿ.ಇನ್ನೂ ಈ ಒಂದು ಪೊಲೀಸರ ದೌರ್ಜನ್ಯ ವಿರುದ್ಧ ಗಜಾನನ ಮಹಾ ಮಂಡಳಿಯವರೇ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು ಮಾಡುತ್ತಿದ್ದಾರೆ