ಬೆಂಗಳೂರು –
ಕೋವಿಡ್ ಹಾಗೂ ಒಮಿಕ್ರಾನ್ ನಿಯಂತ್ರಣಕ್ಕೆ ರಾಜ್ಯ ಸರಕಾರ ಕೆಲವೊಂದಿಷ್ಟು ಮಾರ್ಗಸೂಚಿಗಳನ್ನು ಹೊರಡಿಸಿ ಇದರೊಂದಿಗೆ ಬಿಗಿ ನಿಯಮ ಜಾರಿಗೊಳಿಸಿದೆ.ಸರಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವುದು ಕಡ್ಡಾಯವಾಗಿದ್ದು ಸರಕಾರಿ ನೌಕರರಿಗೆ ವರ್ಕ್ ಫ್ರಂ ಹೋಂ ಸೂತ್ರ ಈ ಬಾರಿಅನ್ವಯವಾಗುವುದಿಲ್ಲ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಆದೇಶದಲ್ಲಿ ಸ್ಪಷ್ಟ ಮಾಡಿದ್ದಾರೆ
ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ವೃಂದದ ಅಧಿಕಾರಿ ಹಾಗೂ ಸಿಬ್ಬಂದಿ ಪ್ರತಿ ದಿನ ಕಚೇರಿಗೆ ಹಾಜರಾ ಗಲೇಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.ಅನ್ಯ ಇಲಾಖೆಯಲ್ಲಿ ಮುಖ್ಯಸ್ಥರು ಹಾಗೂ ಗ್ರೂಪ್ ಎ ದರ್ಜೆ ಅಧಿಕಾರಿಗಳು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಬಿ, ಸಿ, ಡಿ ದರ್ಜೆ ಸಿಬ್ಬಂದಿ 50 : 5೦ ರೊಟೇಶನ್ ಆಧಾರ ದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕೆಂದು ಉಲ್ಲೇಖ ಮಾಡಲಾ ಗಿದೆ
ದೃಷ್ಟಿಹೀನ, ಅಂಗವಿಕಲ, ಗರ್ಭಿಣಿಯರು,ಆರೋಗ್ಯ ಸಮಸ್ಯೆ ಇರುವವರಿಗೆ ಮಾತ್ರ ಕಚೇರಿಗೆ ಬಂದು ಕರ್ತವ್ಯ ನಿರ್ವಹಿಸದೇ ಇರುವುದಕ್ಕೆ ವಿನಾಯಿತಿ ನೀಡಲಾಗಿದೆ ಎಂದು ಸರಕಾರಿ ಆದೇಶ ಸ್ಪಷ್ಟಪಡಿಸಿದೆ.ಇನ್ನೂ ಸರ್ಕಾರಿ ನೌಕರರಿಗೆ ಎರಡು ಡೋಸ್ ಕಡ್ಡಾಯವಾಗಿದ್ದು ವಿಧಾನ ಸೌಧ ಪ್ರವೇಶಕ್ಕೆ ಎರಡು ಡೋಸ್ ಲಸಿಕೆ ಪಡೆಯುವುದು ಕಡ್ಡಾಯಗೊಳಿಸಲಾಗಿದೆ.ಜೊತೆಗೆ ವಿಧಾನಸೌಧ ಪ್ರವೇಶಕ್ಕೆ ಸಾರ್ವಜನಿಕರಿಗೆ ಕೆಲ ನಿರ್ಬಂಧವನ್ನು ವಿಧಿಸಿ ಆದೇಶವನ್ನು ಹೋರಡಿಸಲಾಗಿದೆ..