ಧಾರವಾಡದ ತೇಜಶ್ವಿನಗರ ಸೇತುವೆ ಬಳಿ ಸಾರ್ವಜನಿಕರ ಪ್ರತಿಭಟನೆ – ದಿಢೀರನೇ ರಸ್ತೆ ಬಂದ್ ಮಾಡಿ ಹೋರಾಟ ಮಾಡುತ್ತಿರುವ ಸಾರ್ವಜನಿಕರಿಗೆ ಸ್ಪಂದಿಸಿದ ಶಾಸಕ ಅರವಿಂದ ಬೆಲ್ಲದ…..

Suddi Sante Desk

ಧಾರವಾಡ –

ಹದಗೆಟ್ಟ ರಸ್ತೆಯಿಂದಾಗಿ ಧಾರವಾಡದ ತೇಜಶ್ವಿನಗರ ಸೇತುವೆ ಬಂದ್ ಮಾಡಿ ಸಾರ್ವಜನಿಕರು ಪ್ರತಿಭಟನೆ ಯನ್ನು ಮಾಡಿದರು.ಹೌದು ಸೇತುವೆಯ ಮೇಲೆ ಸ್ವಲ್ಪ ಪ್ರಮಾಣದಲ್ಲಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ದೊಡ್ಡ ದೊಡ್ಡ ಪ್ರಮಾಣದಲ್ಲಿನ ತೆಗ್ಗುಗಳು ಬಿದ್ದಿದ್ದು ಇದರಿಂದಾಗಿ ಸಾರ್ವಜನಿಕರಿಗೆ ಪ್ರಯಾಣಿಸಲು ತುಂಬಾ ತೊಂದರೆಯಾಗುತ್ತಿದ್ದು ಸಾಕಷ್ಟು ಪ್ರಮಾಣದಲ್ಲಿ ಬೈಕ್ ಗಳು ಸ್ಕೀಡ್ ಆಗಿ ಬೀಳುತ್ತಿದ್ದು ಇದರಿಂದಾಗಿ ಬೇಸತ್ತ ಸಾರ್ವಜನಿಕರು ದಿಢೀರನೇ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ಮಾಡಿದರು.

ರಾತ್ರಿ ಎನ್ನದೇ ಸಮಸ್ಯೆ ವಿರುದ್ದ ಸಾರ್ವಜನಿಕರು ಏಕಾ ಎಕಿಯಾಗಿ ಈ ಒಂದು ಸೇತೆಯನ್ನು ಸಂಪೂರ್ಣವಾಗಿ ಬಂದ್ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಕಳೆದ ಹಲವಾರು ದಿನಗಳಿಂದ ಈ ಕುರಿತಂತೆ ಅಧಿಕಾರಿಗ ಳಿಗೆ ಸಾರ್ವಜನಿಕರು ದೂರನ್ನು ನೀಡುತ್ತಿದ್ದು ಇದಕ್ಕೆ ಸ್ಪಂದಿಸದ ಅಧಿಕಾರಿಗಳ ವಿರುದ್ದ ಸಾರ್ವಜನಿಕರು ಅಸಮಾಧಾನವನ್ನು ಹೊರಹಾಕಿದರು

ಇನ್ನೂ ಈ ಕೂಡಲೇ ತೆಗ್ಗುಗಳನ್ನಾದರೂ ಮುಚ್ಚುವಂತೆ ಒತ್ತಾಯವನ್ನು ಮಾಡಿದರು. ಸೇತವೆಯನ್ನು ಸಂಪೂರ್ಣ ವಾಗಿ ಬಂದ್ ಮಾಡಿ ಎಲ್ಲಾ ವಾಹನಗಳ ಸಂಚಾರವನ್ನು ಕೂಡಾ ಬಂದ್ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿ ಸಿದರು ಇನ್ನೂ ಈ ಒಂದು ಮುಖ್ಯ ರಸ್ತೆ ಬಂದ್ ನಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಟ್ರಾಫೀಕ್ ಜಾಮ್ ಉಂಟಾಗಿದ್ದು ಕಂಡು ಬಂದಿತು ಸುದ್ದಿ ತಿಳಿದ ವಿದ್ಯಾಗಿರಿ ಪೊಲೀಸರು ಸ್ಥಳಕ್ಕೇ ಆಗಮಿಸಿ ನಾಳೆ ಒಳಗಾಗಿ ದುರಸ್ತಿ ಮಾಡಿಸುವ ಭರವಸೆಯನ್ನು ನೀಡಿದ ಮೇಲೆ ಸಾರ್ವಜನಿಕರು ತಮ್ಮ ಹೋರಾಟವನ್ನು ಹಿಂದೆ ತಗೆದುಕೊಂಡರು.ಇತ್ತ ಈ ಒಂದು ಸಾರ್ವಜನಿಕರ ಸಮಸ್ಯೆ ಗೆ ಶಾಸಕ ಅರವಿಂದ ಬೆಲ್ಲದ ಸ್ಪಂದಿಸಿ ನಾಳೆ ಕೂಡಲೇ ರಸ್ತೆ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಮಳೆಯಿಂದಾಗಿ ಕಾಮಗಾರಿ ನಿಲ್ಲಿಸಲಾಗಿದೆ ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.