ಧಾರವಾಡದಲ್ಲಿ ಲಾರಿ ಹರಿದು ಬಾಲಕಿ ಸಾವು – ಆಕ್ರೋಶಗೊಂಡ ಪೋಷಕರಿಂದ ಲಾರಿ ಗ್ಲಾಸ್ ಗೆ ಕಲ್ಲು ಹೊಡೆದು ಆಕ್ರೋಶ…..

Suddi Sante Desk

ಧಾರವಾಡ –

ಬಾಲಕಿಯೊಬ್ಬಳ ಮೇಲೆ ಮಿನಿ ಲಾರಿ ಹರಿದು ಸ್ಥಳದಲ್ಲೇ ಸಾವಿಗೀಡಾದ ಘಟನೆ ಧಾರವಾಡದಲ್ಲಿ ನಡೆದಿದೆ ಹೌದು ಮೈಮೇಲೆ ಮಿನಿ ಲಾರಿ ಹರಿದು ಬಾಲಕಿ ಸಾವಿಗೀಡಾಗಿ ದ್ದಾಳೆ.ನಗರದ ಕಲ್ಯಾಣನಗರ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದ್ದು ಅನಂ ರಿಜ್ವಾನ್ ಐನಾಪೂರ (೩) ಮೃತಳಾದ ಬಾಲಕಿಯಾಗಿದ್ದಾಳೆ.

ಧಾರವಾಡ ಟೈವಾಕ್ ಕಾಲೋನಿ ನಿವಾಸಿಯಾಗಿದ್ದು ಪೋಷಕರ ಜೊತೆ ಬೇರೆ ಊರಿಗೆ ಹೋಗಲು ಬಸ್ ನಿಲ್ದಾಣದಲ್ಲಿ ನಿಂತಿದ್ದಳು ಬಾಲಕಿ ಈ ವೇಳೆ ಬಾಲಕಿ ಮೇಲೆ ಹಾದು ಹೋಗಿದೆ ಮಿನಿ ಲಾರಿ.ಸೆಪ್ಟಿಕ್ ಟ್ಯಾಂಕ್ ಹೊತ್ತು ಹೋಗುವ ಮಿನಿ ಲಾರಿ.

ಈ ವೇಳೆ ಆಕ್ರೋಶಿತ ಪೋಷಕರಿಂದ ಮಿನಿ ಲಾರಿ ಗಾಜು ಒಡೆದು ಆಕ್ರೋಶವನ್ನು ವ್ಯಕ್ತಪಡಿಸಿದರು.ಇನ್ನೂ ಸುದ್ದಿ ತಿಳಿದ ಧಾರವಾಡ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಈ ಕುರಿತು ದೂರನ್ನು ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.