ಹೃದಯಾಘಾತದಿಂದ ಶಿಕ್ಷಕ ನಿಧನ – ಶಿಕ್ಷಕ ಶ್ರೀಮಂತ ಅವಟಿ ನಿಧನಕ್ಕೆ ನಾಡಿನ ಶಿಕ್ಷಕ ಬಂಧುಗಳಿಂದ ಸಂತಾಪ

Suddi Sante Desk
ಹೃದಯಾಘಾತದಿಂದ ಶಿಕ್ಷಕ ನಿಧನ – ಶಿಕ್ಷಕ ಶ್ರೀಮಂತ ಅವಟಿ ನಿಧನಕ್ಕೆ ನಾಡಿನ ಶಿಕ್ಷಕ ಬಂಧುಗಳಿಂದ ಸಂತಾಪ

ವಿಜಯಪುರ  –

 

ಹೃದಯಾಘಾತದಿಂದ ಶಿಕ್ಷಕರೊಬ್ಬರು ನಿಧನ ರಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ ಹೌದು ಬಸವನಬಾಗೇವಾಡಿಯ ಶ್ರೀ ಅಕ್ಕನಾ ಗಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದ ಶ್ರೀಮಂತ ಅವಟಿ ಅವರೇ ನಿಧನರಾದ ಶಿಕ್ಷಕರಾಗಿದ್ದಾರೆ.

 

ಎದೆನೋವು ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಹೃದಯಾಘಾತ ಸಂಭವಿಸಿದ್ದು ಇನ್ನೇನು ಆಸ್ಪತ್ರೆಗೆ ಹೋಗುವ ದಾರಿ ಮಧ್ಯದಲ್ಲಿಯೇ ಉಸಿರನ್ನು ನಿಲ್ಲಿಸಿದ್ದಾರೆ.ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಹೆಸರನ್ನು ಮಾಡಿದ್ದ ಇವರು ವಿದ್ಯಾರ್ಥಿಗಳಿಗೆ ತುಂಬಾ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು.

 

ಇನ್ನೂ ಇವರ ನಿಧನದಿಂದಾಗಿ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದ್ದು ನಾಡಿನ ಶಿಕ್ಷಕ ಬಂಧುಗಳು ಸಂತಾಪವನ್ನು ಸೂಚಿಸಿ ಭಾವ ಪೂರ್ಣ ನಮನವನ್ನು ಸಲ್ಲಿಸಿದ್ದಾರೆ.ಮೃತ ಶಿಕ್ಷಕರ ಅಂತ್ಯಕ್ರಿಯೆ ಅವಟಿಯವರ ತೋಟದ ಮನೆ ಬಸವನ ಬಾಗೇವಾಡಿಯಲ್ಲಿ ರವಿವಾರ ಬೆಳಿಗ್ಗೆ ನಡೆಯಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.