ಬೆಂಗಳೂರು –
ಆತ್ಮೀಯ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ ಬಂಧುಗಳೇ……… ಈಗಾಗಲೇ ಸಾಮಾಜಿಕ ಜಾಲತಾಣ ದಲ್ಲಿ ವದಂತಿಗಳು ಹಬ್ಬುತ್ತಿದ್ದು ಮೈಸೂರು ವಿಭಾಗದ ಪ್ರೌಢಶಾಲಾ ಇಬ್ಬರು ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ಐದು ವರ್ಷಗಳ ಅವಧಿಗೆ ವರ್ಗಾವಣೆಗೆ ಅವಕಾಶವಿಲ್ಲ ವೆಂದು ಪ್ರಥಮ ನೇಮಕಾತಿ ಆದೇಶದಲ್ಲಿ ತಿಳಿಸಿರುವ ಕಾರಣ ಕರ್ನಾಟಕ ಆಡಳಿತ ಮಂಡಳಿಯಲ್ಲಿ ದಾವೆಯನ್ನು ಸಲ್ಲಿಸಿದ್ದು ನ್ಯಾಯಮಂಡಳಿಯು ತಾತ್ಕಾಲಿಕವಾಗಿ ವರ್ಗಾ ವಣೆ ವೇಳಾಪಟ್ಟಿಗೆ ತಡೆಯಾಜ್ಞೆ ನೀಡಿರುವ ಕಾರಣ ನಾಳೆ ನಡೆಯುವ ಕೌನ್ಸಲ್ಲಿಂಗ್ ತಾತ್ಕಾಲಿಕವಾಗಿ ನಿಲ್ಲಿಸಲಾಗಿ ರುತ್ತದೆ.
ಈ ಸಂಬಂಧ ಅಧಿಕಾರಿಗಳು ನ್ಯಾಯಾಲಯಕ್ಕೆ ಸಮರ್ಥ ವಾದ ಉತ್ತರವನ್ನು ನಾಳೆ ನೀಡಲಿದ್ದು ಬಹುಶಃ ಸೋಮ ವಾರದಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಯಥಾ ರೀತಿ ಮುಂದುವರೆಯಲಿದೆ ಯಾರು ಕೂಡ ಆತಂಕಕ್ಕೆ ಒಳಗಾಗಬಾರದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷರೊಂದಿಗೆ ಚರ್ಚಿಸಿದ್ದು ಸ್ಪಷ್ಟೀಕರಿಸಿರುತ್ತಾರೆ?????? ಧನ್ಯವಾದಗಳು??????? ಸಿಎಸ್ ಷಡಾಕ್ಷರಿ ರಾಜ್ಯಾಧ್ಯಕ್ಷರು. ಈ ಒಂದು ಸಂದೇಶ ವನ್ನು ಯಥಾವತ್ತಾಗಿ ಉಲ್ಲೇಖ ಮಾಡಲಾಗಿದೆ