This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

Sports News

ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಂದು ಜವಾಬ್ದಾರಿ ಪ್ರತಿದಿನ ತಪ್ಪದೆ ಈ ಕೆಲಸ ಮಾಡಲೇಬೇಕು ಮಾಡದಿದ್ದರೆ ಸಂಕಷ್ಟ…..

WhatsApp Group Join Now
Telegram Group Join Now

ಬೆಂಗಳೂರು –

ರಾಜ್ಯದಲ್ಲಿನ ಸರ್ಕಾರಿ ನೌಕರರಿಗೆ ಈಗ ಮತ್ತೊಂದು ಜವಾಬ್ದಾರಿ ನೀಡಲಾಗಿದೆ ಹೌದು ಹೈಕೋರ್ಟ್ ನಿದೇಶನದ ಅನ್ವಯ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ನೌಕರರ ನಗದು ಘೋಷಣೆ ವಹಿ(ಲೆಡ್ಜರ್‌)ನಿರ್ವಹಣೆ ಮಾಡುವುದು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಮಹತ್ವದ ಸುತ್ತೋಲೆ ಹೊರಡಿಸಿದ್ದಾರೆ.ನೌಕರರು ಕಚೇರಿಗೆ ಆಗಮಿಸಿದ ತಕ್ಷಣ ತಮ್ಮೊಂದಿಗೆ ತಂದಿರುವ ವೈಯಕ್ತಿಕ ಹಣವನ್ನು ನಗದು ಘೋಷಣೆ ವಹಿಯಲ್ಲಿ ಘೋಷಿಸಿ ಅಧಿಕೃತ ಸಹಿ ಹಾಕಬೇಕು.ಒಂದು ವೇಳೆ ಕರ್ತವ್ಯದ ಸಮಯದಲ್ಲಿ ನೌಕರರ ಬಳಿ ಘೋಷಿಸಿದ ಮೊತ್ತಕ್ಕಿಂತ ಹೆಚ್ಚು ಹಣ ದೊರೆತರೆ ಅದು ಅಕ್ರಮ ಸಂಪಾದನೆ ಎಂದು ಪರಿಗಣಿಸ ಲಾಗುವುದು ಎಂದು ಹೇಳಲಾಗಿದೆ

ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅಡಿ ಈಗಾಗಲೇ ಪ್ರತಿ ಕಚೇರಿಯಲ್ಲೂ ನಗದು ಘೋಷಣೆ ವಹಿ ನಿರ್ವಹಣೆ ಮಾಡುವುದು ಕಡ್ಡಾಯವಾಗಿದೆ.ಆದರೆ ಸರ್ಕಾರಿ ಕಚೇರಿ ಗಳಲ್ಲಿ ಈ ಲೆಡ್ಜರ್‌ನ್ನು ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಥವಾ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ನೌಕರರ ಬಳಿ ನಗದು ವಶಪ ಡಿಸಿಕೊಂಡರೆ ಅದು ವೈಯಕ್ತಿಕ ಹಣವೋ ಅಥವಾ ಲಂಚದ ಹಣವೋ ತಿಳಿಯುತ್ತಿರಲಿಲ್ಲ.

ಇದೇ ರೀತಿಯ ಪ್ರಕರಣ ಒಂದರ ವಿಚಾರಣೆ ವೇಳೆ 2021 ರ ನವೆಂಬರ್ 10 ರಂದು ಸರ್ಕಾರದ ಮುಖ್ಯ ಕಾರ್ಯ ದರ್ಶಿಗಳಿಗೆ ನಿರ್ದೇಶನ ನೀಡಿದ ಹೈಕೋರ್ಟ್‌ ಮೂರು ತಿಂಗಳ ಒಳಗಾಗಿ ಹೊಸ ಸುತ್ತೋಲೆ ಹೊರಡಿಸಿ ನಿಯಮ ಅನುಷ್ಠಾನಗೊಳಿಸಬೇಕು.ಇದನ್ನು ನಿರ್ಲಕ್ಷಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿತ್ತು ಹೀಗಾಗಿ ಕೋರ್ಟ್‌ ಆದೇಶದ ಅನ್ವಯ ಸುತ್ತೋಲೆ ಹೊರಡಿಸಿರುವ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಪ್ರತಿ ಇಲಾಖೆ,ನಿಗಮ,ಸಂಸ್ಥೆಗಳು ಸೇರಿ ದಂತೆ ಎಲ್ಲಾ ರೀತಿಯ ಸರ್ಕಾರಿ ಕಚೇರಿಗಳಲ್ಲೂ ನೌಕರರ ವೈಯಕ್ತಿಕ ನಗದನ್ನು ಗಮನಿಸಲು ನಗದು ಘೋಷಣೆ ವಹಿ ನಿರ್ವಹಣೆ ಮಾಡಬೇಕು.ಹಾಜರಾತಿ ಪುಸ್ತಕದಲ್ಲಿ ಕರ್ತ ವ್ಯಕ್ಕೆ ವರದಿ ಮಾಡಿಕೊಳ್ಳುವ ಸಮಯ ದಲ್ಲೇ ಕಚೇರಿಗೆ ತಂದ ನಗದು ಮೊತ್ತವನ್ನು ನಗದು ಘೋಷಣೆ ವಹಿಯಲ್ಲಿ ತನ್ನ ಸಹಿಯೊಂದಿಗೆ ಘೋಷಿಸ ಬೇಕೆಂದು ತಿಳಿಸಿದ್ದಾರೆ.

ಇನ್ನೂ ನಗದು ಘೋಷಣೆ ವಹಿಯನ್ನು ಕಚೇರಿಯ ವೇಳೆಯ ಎಲ್ಲಾ ಸಮಯದಲ್ಲೂ ಯಾವುದೇ ಉನ್ನತ ಅಧಿಕಾರಿಗಳು ಮುಕ್ತವಾಗಿ ತಪಾಸಣೆ ನಡೆಸಬಹುದು. ಯಾವುದೇ ನೌಕರರು ನಗದು ಘೋಷಣೆ ವಹಿಯಲ್ಲಿ ಘೋಷಿಸಿದ್ದಕ್ಕಿಂತ ಹೆಚ್ಚಿನ ಹಣವನ್ನು ಹೊಂದಿರುವುದು ಕಂಡು ಬಂದರೆ ಅಂತಹ ಹೆಚ್ಚುವರಿ ಹಣವನ್ನು ಅಕ್ರಮ ಸಂಪಾದನೆ ಎಂದು ಅರ್ಥೈಸಲಾಗುತ್ತದೆ.ಹೆಚ್ಚುವರಿ ಹಣ ವನ್ನು ಸಕ್ರಮ ಹಣ ಎಂದು ಸಾಬೀತುಪಡಿಸುವುದು ನೌಕರರ ಹೊಣೆಯಾಗುತ್ತದೆ ಎಂದು ಉಲ್ಲೇಖ ವನ್ನು ಮಾಡಲಾಗಿದೆ

ಈ ನಗದು ಘೋಷಣೆ ವಹಿಯು ಸಂಬಂಧಪಟ್ಟವಿಭಾಗ ಅಥವಾ ಶಾಖೆಯ ಬಿ-ದರ್ಜೆ ಅಧಿಕಾರಿಯ ವಶದಲ್ಲಿರ ಬೇಕು.ಆ ಅಧಿಕಾರಿಯು ನೌಕರರು ನಮೂದಿಸಿರುವ ವಿವರಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಅಧಿಕಾರ ವನ್ನು ಹೊಂದಿರುತ್ತಾರೆ ಎಂದು ಸುತ್ತೋಲೆಯಲ್ಲಿ ತಿಳಿಸಲಾ ಗಿದೆ.

ಇದನ್ನು ಜಾರಿಗೆ ತರಲು ಪ್ರಮುಖ ಹಿನ್ನೆಲೆ
ಶ್ರೀರಂಗಪಟ್ಟಣ ಪುರಸಭೆ ಕಿರಿಯ ಎಂಜಿನಿಯರ್‌ ಶಿವ ಎಂಬುವವರ ಮೇಲೆ 2014ರಲ್ಲಿ ಲೋಕಾಯುಕ್ತ ಅಧಿಕಾರಿ ಗಳು ದಾಳಿ ನಡೆಸಿ ನಗದು ಹಣ ವಶಪಡಿಸಿಕೊಂಡಿದ್ದರು. ಇದು ಲಂಚದ ಹಣ ಎಂದು ಚಾರ್ಜ್ ಶೀಟ್‌ ಸಲ್ಲಿಸಿದ್ದರು. ಆದರೆ, ಶಿವ ಅವರ ಪರ ವಕೀಲರು ಅದು ಶಿವ ಅವರ ವೈಯಕ್ತಿಕ ಹಣ ಎಂದು ವಾದಿಸಿದ ಹಿನ್ನೆಲೆಯಲ್ಲಿ ಲೋಕಾ ಯುಕ್ತ ನ್ಯಾಯಾಧೀಶರು ಇಲಾಖಾ ತನಿಖೆಗೆ ಆದೇಶ ಮಾಡಿದ್ದರು.ಶಿವ ಅವರು ಹೈಕೋರ್ಟ್‌ ಮೊರೆ ಹೋಗಿ ಇಲಾಖಾ ವಿಚಾರಣೆ ರದ್ದುಪಡಿಸುವಂತೆ ರಿಟ್‌ ಅರ್ಜಿ ಸಲ್ಲಿಸಿದ್ದರು.ಈ ಪ್ರಕರಣದ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಗದು ಘೋಷಣೆ ವಹಿ ನಿರ್ವಹಣೆಗೆ ಆದೇಶಿಸಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk