ಧಾರವಾಡ –
ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿಗೆ ಮತ್ತೆ ಒಂದು ವಾರ ನ್ಯಾಯಾಂಗ ಬಂಧನವನ್ನು ವಿಸ್ತರಣೆ ಮಾಡಲಾಗಿದೆ. ಈಗಾಗಲೇ ಬೆಳಗಾವಿ ಹಿಂಡಲಗಾ ಜೈಲು ಸೇರಿರುವ ವಿನಯ ಕುಲಕರ್ಣಿಯವರ ನ್ಯಾಯಾಂಗ ಬಂಧನದ ಅವಧಿ ಇವತ್ತಿಗೆ ಮುಕ್ತಾಯವಾಗಿದೆ. ಹೀಗಾಗಿ ಇವತ್ತು ಮತ್ತೇ ಧಾರವಾಡದ 3ನೇ ಹೆಚ್ಚುವರಿ ವಿಶೇಷ ನ್ಯಾಯಾಲಯ ಇವರ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಿ ಆದೇಶವನ್ನು ಹೊರಡಿಸಿತು.

ಈ ಕುರಿತಂತೆ ಇಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಗಂಗಾಧರ ಸಿ ಎಮ್ ಅವರು ಮತ್ತೇ ನ್ಯಾಯಾಂಗ ಬಂಧನವನ್ನು ಡಿಸೆಂಬರ್ 28 ರವರೆಗೆ ವಿಸ್ತರಣೆ ಮಾಡಿ ಆದೇಶವನ್ನು ಹೊರಡಿಸಿದ್ರು.ಇದರಿಂದ ಮತ್ತೆ ವಿನಯ ಕುಲಕರ್ಣಿ ಅವರಿಗೆ ಒಂದು ವಾರಗಳ ಕಾಲ ಜೈಲೇ ಗತಿಯಾದಂತಾಗಿದೆ.

ಇನ್ನೂ ಇತ್ತ ಡಿಸೆಂಬರ್ 28 ರಂದು ಅಂದೇ ವಿನಯ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿ ಅವರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾಗಲಿದ್ದು ಹೀಗಾಗಿ ಇಬ್ಬರಿಗೂ ಒಂದೇ ದಿನ ವಿಚಾರಣೆಗೆ ಅನುಕೂಲವಾಗುತ್ತದೆ ಎಂದುಕೊಂಡು ನ್ಯಾಯಾಧೀಶರು ಡಿಸೆಂಬರ್ 28 ಕ್ಕೇ ಅಂದರೆ ಒಂದು ವಾರವಷ್ಟೇ ಮುಂದೂಡಿದ್ದಾರೆ.